ಬದಿಯಡ್ಕ : ಪಿಂಚಣಿದಾರರ ಕುಂಬ್ಡಾಜೆ ಘಟಕದಿಂದ 'ಪೆನ್ಷನರ್ಸ್ ದಿನ'ವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಡೆಪ್ಯೂಟಿ ತಹಸಿಲ್ದಾರ್ ಶ್ರೀಕೃಷ್ಣ ಭಟ್ ಅವರನ್ನು ಗೌರವಿಸಲಾಯಿತು. ಪ್ರಾಂತ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಈಶ್ವರ ರಾವ್, ಶ್ರೀಧರ್ ಭಟ್ ಜಿಲ್ಲಾ ಸಮಿತಿಯ ಸೀತಾರಾಮ ರಾವ್, ಬ್ಲೋಕ್ ಸಮಿತಿ ಸದಸ್ಯ ವೆಂಕಟ್ರಮಣ ಕೆದಿಲ್ಲಾಯ, ಕುಂಬ್ಡಾಜೆ ಪಂಚಾಯತ್ ನ ಕಾರ್ಯದರ್ಶಿ ವಿಷ್ಣು ಭಟ್, ಜಿಲ್ಲಾ ಸಮಿತಿ ಸದಸ್ಯ ಸೀತಾರಾಮ ಭಟ್ ಉಪಸ್ಥಿತರಿದ್ದರು ಬ್ಲೋಕ್ ಸಮಿತಿಯ ಅಧ್ಯಕ್ಷ ಸೂರ್ಯನಾರಾಯಣ ಭಟ್ ಸ್ವಾಗತಿಸಿ, ಚೆಂಗಳ ಘಟಕದ ಕಾರ್ಯದರ್ಶಿ ಕೃಷ್ಣೋಜಿರಾವ್ ವಂದಿಸಿದರು.

0 Comments