ಬದಿಯಡ್ಕ : ಮನೆಯ ಸಿಟ್ಔಟ್ನಲ್ಲಿ ಮಧ್ಯವಯಸ್ಕ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಾಡಮನೆ ಮಾದತ್ತಡ್ಕ ನಿವಾಸಿ, ದಿ. ಗೋವಿಂದ ನಾಯಕ್–ಪರಮೇಶ್ವರಿ ದಂಪತಿಯ ಪುತ್ರ ನಾರಾಯಣ ನಾಯಕ್ (54) ಮೃತಪಟ್ಟವರು.
ನಿನ್ನೆ ಬೆಳಗ್ಗೆ ಕುಟುಂಬಸ್ಥರು ಸಂಬಂಧಿಕರ ಮನೆಗೆ ತೆರಳಿದ್ದರು. ಮನೆಯಲ್ಲಿ ನಾರಾಯಣ ನಾಯಕ್ ಮಾತ್ರ ಇದ್ದರು. ಇಂದು ಮುಂಜಾನೆ ಕುಟುಂಬಸ್ಥರು ಮನೆಗೆ ಹಿಂದಿರುಗಿದಾಗ ಸಿಟ್ಔಟ್ನಲ್ಲಿ ನಾರಾಯಣ ನಾಯಕ್ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.
ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅದಾಗಲೇ ಮೃತಪಟ್ಟಿದ್ದರು. ಮೃತರು ಪತ್ನಿ ತಿರುಮಲೇಶ್ವರಿ, ಮಕ್ಕಳಾದ ಮಿಥುನ್ರಾಜ್ ಹಾಗೂ ಹರ್ಷಿತ್ ಅವರನ್ನು ಅಗಲಿದ್ದಾರೆ. ಸಹೋದರಿಯರಾದ ಗೌರಿ, ಪರಮೇಶ್ವರಿ ಅವರನ್ನು ಅಗಲಿದ್ದಾರೆ. ಅವರ ಇನ್ನೋರ್ವ ಸಹೋದರಿ ಲಕ್ಷ್ಮಿ ಈ ಹಿಂದೆಯೇ ಮೃತಪಟ್ಟಿದ್ದಾರೆ.
ಹೆಚ್ಚಿನ ಅಪ್ಡೇಟ್ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments