ಕಾಸರಗೋಡು: ನರೇಂದ್ರ ಮೋದಿ ಸರಕಾರದ 11 ನೇ ವಾರ್ಷಿಕದ ಅಂಗವಾಗಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಸಂಕಲ್ಪ್ ಸೇ ಸಿದ್ದಿ ಜಿಲ್ಲಾ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ಪಕ್ಷದ ರಾಜ್ಯ ಸಮಿತಿಯ ಮಾಜಿ ಕಾರ್ಯದರ್ಶಿ ವಿ.ಕೆ.ಸಜೀವನ್ ಉದ್ಘಾಟಿಸಿದರು. ಅವರು ಮಾತನಾಡಿ ನರೇಂದ್ರ ಮೋದಿಯವರು ಕೋವಿಡ್ ಮಹಾಮಾರಿಯ ಸಂಕಷ್ಡ ಸಮಯದಲ್ಲಿ ಆರೋಗ್ಯ, ಆಹಾರ ವಿತರಣಾ ರಂಗದಲ್ಲಿ ಉಂಟಾದ ಸವಾಲುಗಳನ್ನು ಅಭಿವೃದ್ದಿಯ ಸ್ವಯಂ ಪರ್ಯಾಯವಾಗಿ, ಸಾಧನೆಗಳನ್ನಾಗಿ ಮಾಡಿದ ಆಡಳಿತಾಧಿಕಾರಿಯಾಗಿದ್ದಾರೆ ಎಂದರು. ಜನ್ ಧನ್ ಬ್ಯಾಂಕ್ ಖಾತೆಗಳು, ಫಲಾನುಭವಿಗಳ ಖಾತೆಗೆ ಸವಲತ್ತು ತಲುಪಿಸುವ ವಿಧಾನ ಎಂಬಿವು ಜಗತ್ತನ್ನೇ ಬೆರಗುಗೊಳಿಸಿದೆ. ನೋಟು ನಿಷೇಧ, ರಾಮಕ್ಷೇತ್ರ ನಿರ್ಮಾಣ, 370 ನೇ ವಿಧಿ ರದ್ದತಿ ಎಂಬಿವು 11 ವರ್ಷದ ಆಡಳಿತದ ಮೈಲುಗಲ್ಲು ಎಂದವರು ಹೇಳಿದರು.
ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮನುಲಾಲ್ ಮೇಲತ್, ಎನ್.ಬಾಬುರಾಜ್, ಸುನಿಲ್.ಪಿ.ಆರ್.ಮೊದಲಾದವರು ಮಾತನಾಡಿದರು.
0 Comments