Ticker

6/recent/ticker-posts

ಗಾಂಜಾ ಮಾರಾಟಕ್ಕೆ ಅಡ್ಡಿ ಪಡಿಸಿದನೆಂದು ಆರೋಪಿಸಿ ಕುಂಬಳೆಯಲ್ಲಿ ಆಟೋ ಚಾಲಕನಿಗೆ ಇರಿತ, ಆರೋಪಿಯ ಬಂಧನ


 ಕುಂಬಳೆ: ಗಾಂಜಾ ಮಾರಾಟಕ್ಕೆ ಅಡ್ಡಿ ಪಡಿಸಿದನೆಂದು ಆರೋಪಿಸಿ ಆಟೋ ಚಾಲಕನನ್ನು ಇರಿದು ಹತ್ಯೆಗೈಯ್ಯಲು ಯತ್ನಿಸಿದ ಘಟನೆ ನಡೆದಿದೆ. ಕುಂಬಳೆ ಪೇಟೆಯ ಆಟೋ ಚಾಲಕ, ಶಾಂತಿಪಳ್ಳ ನಿವಾಸಿ ಮುಹಮ್ಮದ್ ಅಶ್ರಫ್(35) ಗಾಯಗೊಂಡವರಾಗಿದ್ದು ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಂಜಾ ಮಾರಾಟಕ್ಕೆ ಅಡ್ಡಿ ಪಡಿಸಲಾಗಿದೆ ಎಂದು ಆರೋಪಿಸಿ ಕುಂಬಳೆ ಬಸ್ಸು ನಿಲ್ದಾಣ ಬಳಿ ಆರೋಪಿ ಕಣ್ಣೂರು ನಾರಾತ್ ಉಳಿಕಲ್ ನಿವಾಸಿ ಮುಹಮ್ಮದ್  ರಾಫಿ (34) ಕತ್ತಿಯಿಂದ ಇರಿದನೆಂದು ಗಾಯಾಳು ದೂರಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ

Post a Comment

0 Comments