ಕಾಸರಗೋಡು : ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ತಾಲೂಕು ವತಿಯಿಂದ ಕಾಸರಗೋಡಿನಲ್ಲಿ ಮೊಟ್ಟಮೊದಲ ಬಾರಿಗೆ ಭಜನಾ ಕಮ್ಮಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಬಗ್ಗೆ ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ
ಸಿದ್ದತಾ ಸಭೆ ಜರಗಿತು. ಭಜನಾ ಪರಿಷತ್ ಅಧ್ಯಕ್ಷರಾದ ಡಾ. ಕೆ. ಎನ್ ವೆಂಕಟ್ರಮಣ ಹೊಳ್ಳ ಭಜನಾ ಕಮ್ಮಟದ ರೂಪು ರೇಖೆಯನ್ನು ತಯಾರಿಸಿ ಸದಸ್ಯರು ಮಾಡ ಬೇಕಾದ ಕೆಲಸಗಳ ಬಗ್ಗೆ ವಿವರಿಸಿದರು.ಜಿಲ್ಲಾ ಸಮನ್ವಯ ಅಧಿಕಾರಿ ಶ್ರೀ ಸಂತೋಷ್. ಪಿ. ಅಳಿಯೂರು ಇವರು ಮೊದಲ ಬಾರಿಗೆ ಕಾಸರಗೋಡಿನಲ್ಲಿ ನಡೆಯುವ ಈ ಪುಣ್ಯ ಕಾರ್ಯದಲ್ಲಿ ಊರಿನ ಭಜನಾಸಕ್ತರು ತಪ್ಪದೆ ಭಾಗಿಗಳಾಗಬೇಕಾಗಿ ವಿನಂತಿಸಿದರು. ಭಜನಾ ಪರಿಷತ್ ಗೌರವಧ್ಯಕ್ಷ ಜಯಾನಂದ ಕುಮಾರ್ ಹೊಸದುರ್ಗ ಅವರು ಮಾತನಾಡಿ ನಾವೆಲ್ಲರೂ ಭಜಕರೇ ಹೌದು ಆದರೆ ಭಜನೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರುವವರು ಬಹಳಷ್ಟು ವಿರಳವಷ್ಟೇ ಇರಬಹುದು. ಇಂತಹ ವಿಷಯಗಳನ್ನು ತಿಳಿಯಲು ಭಜನಾ ಕಮ್ಮಟ ಗಳಲ್ಲಿ ಪಾಲ್ಗೊಂಡರೆ ಮಾತ್ರ ಸಾಧ್ಯ ಎಂದು ತಿಳಿಸಿದರು. ಸಭೆಯಲ್ಲಿ ಮಂಜೇಶ್ವರ ತಾಲೂಕು ಭಜನಾ ಪರಿಷತ್ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಸಂತಡ್ಕ, ಪೇಟೆ ವೆಂಕಟ್ರಮಣ ದೇವಸ್ಥಾನದ ಸಮಿತಿಯ ಪ್ರಮುಖರಲ್ಲಿ ಒಬ್ಬರಾದ ಕೆ. ಎನ್.ರಾಮಕೃಷ್ಣ ಹೊಳ್ಳ ಕಾಸರಗೋಡು ಇವರು ಸೂಕ್ತ ಸಲಹೆಯನ್ನು ನೀಡುತ್ತಾ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.ಪೇಟೆ ವೆಂಕಟ್ರಮಣ ಮಹಿಳಾ ಭಜನಾ ಸಂಘದ ಪದಾಧಿಕಾರಿಗಳು ವಿಶ್ವಕರ್ಮ ಭಜನಾ ಸಂಘ ಪದಾಧಿಕಾರಿಗಳು ವಿವಿಧ ಭಜನಾ ಸಂಘದ ಸದಸ್ಯರು ಹಾಗೂ ಗಣ್ಯವ್ಯಕ್ತಿಗಳು ಉಪಸ್ಥಿತರಿದ್ದರು.
ಭಜನಾ ಪರಿಷತ್ ಪ್ರಧಾನ ಕಾರ್ಯದರ್ಶಿ ರೋಹಿತ್ ಮಧೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
0 Comments