ಬದಿಯಡ್ಕ: ಮುಗು ಪಡುವಳದಲ್ಲಿ ಹಣ ಜೂಜಾಗಿ ಬಳಸಿ ಕೋಳಿ ಅಂಕ ನಡೆಯುತ್ತಿದೆಯೆಂಬ ಮಾಹಿತಿಯ ಹಿನ್ನೆಲೆಯಲ್ಲಿ ಬದಿಯಡ್ಕ ಪೊಲೀಸರು ನಡೆಸಿದ ದಾಳಿಯಲ್ಲಿ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ.
ನಿಡುಗಳ ಬೇರಿಕೆ ನಿವಾಸಿ ಬಿ.ಉದಯ(35), ಕುಂಬಳೆ ಪೇಟೆಯ ಪ್ರವೀಣ್ ಕುಮಾರ್(30), ಬೇಳ ಕೋಡಿಂಗಾರು ನಿವಾಸಿ ಕೆ.ಗೋಪಾಲ(64), ಸೂರಂಬೈಲು ಪೆರ್ಣೆ ಬಳಿಯ ಶ್ರೀಧರ(42) ಬಂಧಿತರು.
ಇವರ ಕೈಯಿಂದ ನಾಲ್ಕು ಕೋಳಿ, 6800 ರೂ.ವಶಪಡಿಸಲಾಗಿದೆ.
ಬದಿಯಡ್ಕ ಎಸ್.ಐ. ಸುಮೇಶ್ ಬಾಬು ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಇತರರಾದ ರೂಪೇಶ್, ಮುಹಮ್ಮದ್ ಮೊದಲಾದವರು ಭಾಗವಹಿಸಿದರು.
0 Comments