ಮುಳ್ಳೇರಿಯ: ಕಯಂಪಾಡಿ ಅಂಗನವಾಡಿ ಬಳಿ ಜುಗಾರಿ ಆಟದಲ್ಲಿ ನಿರತರಾಗಿದ್ದ 7 ಮಂದಿಯನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಕಾರಡ್ಕ ಅಡ್ಕತೊಟ್ಟಿ ನಿವಾಸಿ ಕೆ.ಬಾಲಚಂದ್ರನ್(46), ಬಳಕ್ಕ ನಿವಾಸಿ ಪಿ.ಕರುಣಾಕರನ್(34), ಕೋಣಾಲ ನಿವಾಸಿ ಸಂತೀಷ್(52), ಕರ್ಮಂತೋಡಿ ನಿವಾಸಿ ರಾಜೇಂದ್ರನ್(49), ಕರ್ಮಂತೋಡಿಯ ಗುರು ಪ್ರಸಾದ್(34), ಕಯಂಪಾಡಿಯ ಕೃಷ್ಣನ್(54), ಸುರೇಶ್(40) ಬಂಧಿತರು. ಇವರ ಕೈಯಿಂದ ಆಟಕ್ಕೆ ಬಳಸಿದ 7080 ರೂ.ವಶಪಡಿಸಲಾಗಿದೆ.
ನಿನ್ನೆ (ಆದಿತ್ಯವಾರ) ರಾತ್ರಿ 8 ಗಂಟೆಯ ವೇಳೆ ಆದೂರು ಎಸ್.ಐ.ವಿಷ್ಣು ಪ್ರಸಾದ್ ನೇತೃತ್ವದ ಪೊಲೀಸರು ದಾಳಿ ನಡೆಸಿದ್ದರು
0 Comments