Ticker

6/recent/ticker-posts

ವಿಮಾನ ದುರಂತಕ್ಕೆ ಮುಂಡಿತ್ತಡ್ಕದ ಆಟೋ ಬ್ರದರ್ಸ್ ಸಂತಾಪ


 ಬದಿಯಡ್ಕ : ಮುಂಡಿತ್ತಡ್ಕ ಪಳ್ಳಂ‌ ಜಂಕ್ಷನ್ ನ‌ ಆಟೋ ಬ್ರದರ್ಸ್ ನೇತೃತ್ವದಲ್ಲಿ ಅಹಮದಾಬಾದ್ ನಲ್ಲಿ  ನಡೆದ ವಿಮಾನ ದುರಂತದಲ್ಲಿ ಮೃತ ಪಟ್ಟ ದುರ್ದೈವಿಗಳಿಗೆ  ಮತ್ತು  ವೈದ್ಯಕೀಯ ಕಲಿಯುತ್ತಿರುವ ವಿದ್ಯಾರ್ಥಿಗಳ ಕಟ್ಟಡ ಮೇಲೆ ವಿಮಾನ ಬಡಿದು ದೇಶದ ಭವಿಷ್ಯವನ್ನು ರೂಪಿಸುವ ವಿದ್ಯಾರ್ಥಿಗಳು ಮಡಿದ ಸಂತಾಪ ಸೂಚಕವಾಗಿ ಆಟೋ ಬ್ರದರ್ಸ್ ಪಳ್ಳ ಇದರ ಚಾಲಕರು ಹಾಗೂ ಊರ ನಾಗರಿಕರು ಪುತ್ತಿಗೆ ಪಂಚಾಯತ್ ಸದಸ್ಯರು  ಒಳಗೊಂಡು ಮಡಿದು ಹೋದವರ ಆತ್ಮ ಕ್ಕೆ ಶಾಂತಿ ಕೋರುತ್ತಾ ಕಪ್ಪು ನಿಶಾನೆ ಕಟ್ಟಿ ಮೌನ ಪ್ರಾರ್ಥನೆ ಯನ್ನು ಸಲ್ಲಿಸಿದರು. ಪುತ್ತಿಗೆ ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಹಾಗೂ ಆಟೋ ಚಾಲಕರು,ಸ್ಥಳೀಯರು ಪಾಲ್ಗೊಂಡಿದ್ದರು.

Post a Comment

0 Comments