Ticker

6/recent/ticker-posts

ನಾಪತ್ತೆಯಾದ ಮಧ್ಯ ವಯಸ್ಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಪೆರ್ಲ:  ನಾಪತ್ತೆಯಾದ ಮದ್ಯ ವಯಸ್ಕನ ಮೃತದೇಹ ಕರ್ಣಾಟಕ ಗಡಿ ಪ್ರದೇಶದಲ್ಲಿ ಗುಡ್ಡದ ತುದಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾಟುಕುಕ್ಕೆ ಬೋಳುಗುಡ್ಡೆಯ ನಾರಾಯಣ ನಾಯ್ಕ(68) ಮೃತಪಟ್ಟವರು. ಇವರು ಅಡಿಕೆ ಕೊಯ್ಯುವ, ಅಡಿಕೆ ಮರಗಳಿಗೆ ಔಷದ ಸಿಂಪಡಿಸುವ ಕಾರ್ಮಿಕರಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಇವರು ಮನೆಯಿಂದ ಹೊರಟವರು ಅನಂತರ ನಾಪತ್ತೆಯಾಗಿದ್ದರು. ಮನೆಯವರು ಹುಡುಕಾಡುವ ಮಧ್ಯೆ ನಿನ್ನೆ (ಆದಿತ್ಯವಾರ) ಅರ್ದಮೂಲೆ ಬಳಿಯ ಗುಡ್ಡದ ತುದಿಯಲ್ಲಿ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇವರು ಪತ್ತೆಯಾಗಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸರು ಕೇಸು ದಾಖಲಿಸಿದರು. ಮೃತದೇಹದ ಪೋಸ್ಟ್ ಮಾರ್ಟಂ ನಡೆಸಿದ ನಂತರ  ಅಂತ್ಯಕ್ರಿಯೆ ನಡೆಸಲಾಯಿತು. ಮೃತರು ಪತ್ನಿ ದೇವಕಿ, ಮಕ್ಕಳಾದ ಉದಯ, ರಾಧಾಕೃಷ್ಣ, ಉಷ, ಆಶಾ, ಅಳಿಯಂದಿರಾದ ವಸಂತ, ಹರೀಶ, ಸೊಸೆಯಂದಿರಾದ ಮೀನಾಕ್ಷಿ, ಯಶೊಇಧ, ಸಹೋದರ ಪರಮೇಶ್ವರ, ಸಹೋದರಿ ಲಲಿತ ಎಂಬಿವರನ್ನು ಅಗಲಿದ್ದಾರೆ

Post a Comment

0 Comments