Ticker

6/recent/ticker-posts

ಅತಿ ತೀವ್ರ ಮಳೆ, ರಾಜ್ಯದ 11 ಜಿಲ್ಲೆಗಳಲ್ಲಿ, 2 ತಾಲೂಕುಗಳಲ್ಲಿ ಶಿಕ್ಷಣ ಕೇಂದ್ರಗಳಿಗೆ ರಜೆ


 ತಿರುವನಂತಪುರಂ: ಅತೀ ತೀವ್ರ ಮಳೆಯ ಹಿನ್ನೆಲೆಯಲ್ಲಿ ರಾಜ್ಯದ 11 ಜಿಲ್ಲೆಗಳಲ್ಲಿ ಶಿಕ್ಷಣ ಕೇಂದ್ರಗಳಿಗೆ ರಜೆ ಸಾರಲಾಗಿದೆ. ಕಾಸರಗೋಡು, ಮಲಪ್ಪುರಂ, ವಯನಾಡ್, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ಇಡುಕ್ಕಿ, ಕೊಟ್ಟಯಂ, ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಎಲ್ಲ ಶಿಕ್ಷಣ ಕೇಂದ್ರಗಳಿಗೆ ರಜೆ ಸಾರಲಾಗಿದೆ. ಕಣ್ಣೂರು, ಕೋಜಿಕ್ಕೋಡ್ ಜಿಲ್ಲೆಗಳಲ್ಲಿ ಶಾಲೆ, ಅಂಗನವಾಡಿಗಳಿಗೆ ರಜೆ ನೀಡಲಾಗಿದೆ. ಅಲ್ಲದೆ ಕುಟ್ಟನಾಡ್, ಅಂಬಲಪುಯ ತಾಲೂಕುಗಳಲ್ಲೂ ಇಂದು ಎಲ್ಲ ಶಿಕ್ಷಣ ಕೇಂದ್ರಗಳಿಗೆ ರಜೆಯಾಗಿರುತ್ತದೆ. ಮಳೆಯ ಜತೆ ಬಿರುಗಾಳಿಯೂ ಸಹ ಬೀಸುತ್ತಿದ್ದು ವಿವಿದೆಡೆ ಬಾರೀ ನಾಶ ನಷ್ಟ ಉಂಟಾಗಿದೆ.

Post a Comment

0 Comments