ಕಾಸರಗೋಡು: ಅಡಿಕೆ ತೋಟಕ್ಕೆ ಹೋಗುವ ಮಧ್ಯೆ ನೀರಿನಲ್ಲಿ ಬಿದ್ದು ನಾಪತ್ತೆಯಾದ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಕೂಡ್ಲು ಗಂಗೈ ರಸ್ತೆಯ ಗಣೇಶ್ ನಾಯಕ್ ರ ಪತ್ನಿ ಭವಾನಿ(65) ಯವರ ಮೃತದೇಹ ಇಂದು ( ಮಂಗಳವಾರ) ಬೆಳಗ್ಗೆ ಪತ್ತೆಯಾಗಿವೆ. ನಿನ್ನೆ (ಸೋಮವಾರ) ಬೆಳಗ್ಗೆ 11 ಗಂಟೆಗೆ ಅಡಿಕೆ ತೋಟಕ್ಕೆಂದು ಹೋದವರು ನಾಪತ್ತೆಯಾಗಿದ್ದರು. ಅವರು ನೀರಿನ ಸೆಳೆತಕ್ಕೆ ಸಿಲುಕಿದ್ದು ಅಗ್ನಿಶಾಮಕ ದಳ, ಸ್ಥಳೀಯರು ಸೇರಿ ಹುಡುಕಾಟ ನಡೆಸಿದ್ದರೂ ಅವರನ್ನು ಪತ್ತೆ ಹಚ್ಚಲಾಗಿರಲಿಲ್ಲ. ಇಂದು ಬೆಳಗ್ಗೆ 7 ಗಂಟೆಯ ವೇಳೆ ಪುನಃ ಹುಡುಕಾಟ ಆರಂಭಿಸಿದಾಗ ಅವರ ಮೃತದೇಹ ಲಭಿಸಿದೆ.
ನಿನ್ನೆ (ಸೋಮವಾರ) ಕಾಸರಗೋಡು ಜಿಲ್ಲೆಯಲ್ಲಿ ನೀರಜನಲ್ಲಿ ಮುಳುಗಿ ಮೂರು ಜನ ಮೃತಪಟ್ಟಿದ್ದಾರೆ. ಬಂದ್ಯೋಡು ಕೊಕ್ಕಚ್ಚಾಲು ನಿವಾಸಿ ಮುಹಮ್ಮದ್ ಸುಲ್ತಾನ್(8), ಬಾಡೂರು ಓಣಿಬಾಗಿಲು ನಿವಾಸಿ ಫಾತಿಮ ಶಿಬ(8) ಮೃತಪಟ್ಟಿದ್ದರು. ಇದೀಗ ಕೂಡ್ಲು ನಿವಾಸಿ ಭವಾನಿ ಸಹ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ
0 Comments