Ticker

6/recent/ticker-posts

ಕುಂಬಳೆ ಬಸ್ಸು ನಿಲ್ದಾಣದಲ್ಲಿ ನಡೆದ ಅವ್ಯವಹಾರಗಳ ಮಾಹಿತಿ ಬಹಿರಂಗಪಡಿಸಲು ಒತ್ತಾಯ, ಬಿಜೆಪಿ ನಿಯೋಗದಿಂದ ಪಂಚಾಯತು ಕಾರ್ಯದರ್ಶಿಗೆ ಮನವಿ


 ಕುಂಬಳೆ: ಕುಂಬಳೆ ಬಸ್ ನಿಲ್ದಾಣದಲ್ಲಿ ವ್ಯಾಪಕವಾದ ಅವ್ಯವಹಾರ ಹಾಗೂ ಭ್ರಷ್ಟಾಚಾರ ನಡೆದಿದ್ದು ಈ ಬಗ್ಗೆ ಪೂರ್ಣವಾಗಿ ಜನರಿಗೆ ತಿಳಿಸಬೇಕು. ಅದೇ ರೀತಿ ಈ ವರೆಗೆ ನಡೆದ ಭ್ರಷ್ಟಾಚಾರಗಳ ಬಗ್ಗೆ ಸೂಕ್ತವಾದ ತನಿಖೆ ನಡೆಸಬೇಕು. ಯಾವುದೇ ರೀತಿಯಲ್ಲಿ ಬಸ್ ನಿಲ್ದಾಣದ ಮೊತ್ತವನ್ನು ಮಂಜೂರು ಮಾಡಬಾರದು ಎಂದು ಒತ್ತಾಯಿಸುಇ ಪಂಚಾಯತ್ ಬಿಜೆಪಿ ನಿಯೋಗ ಕುಂಬ್ಳೆ ಗ್ರಾಮ ಪಂಚಾಯತ್ ಕಾರ್ಯದರ್ಶಿಗೆ ದೂರು ನೀಡಿದೆ. ಬಿಜೆಪಿ ಮಂಡಲ ಕಾರ್ಯದರ್ಶಿ ಪ್ರದೀಪ್ ಕುಮಾರ್,ಮಂಡಲ ಉಪಾಧ್ಯಕ್ಷೆ ಶ್ರೀಮತಿ ಪ್ರೇಮಲತಾ, ಬಿಜೆಪಿ ದಕ್ಷಿಣ ಉತ್ತರ ವಲಯ ಅಧ್ಯಕ್ಷರಾದ ಸುಜಿತ್ ರೈ,ಪ್ರಸಾದ್ ರೈ ಮಡ್ವ, ದಕ್ಷಿಣ ವಲಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಶೆಟ್ಟಿ,ಪಂಚಾಯತ್ ಸದಸ್ಯರಾದ ಶ್ರೀಮತಿ ಸುಲೋಚನ,ಮೋಹನ ಕೆ ಬಂಬ್ರಾಣ,ಅಜಯ್ ಉಪಸ್ಥಿತಿಯಿದ್ದರು.

Post a Comment

0 Comments