Ticker

6/recent/ticker-posts

ಕಾಟುಕುಕ್ಕೆಯಲ್ಲಿ ಮನೆ ಮೇಲೆ ಗುಡ್ಡ ಕುಸಿತ : ಇಬ್ಬರು ಮಕ್ಕಳು ಅದೃಷ್ಟವಶಾತ್ ಪಾರು

 


ಪೆರ್ಲ :  ಬಿರುಸುಗೊಂಡ ಮಳೆ ತೀವ್ರ ಹಾನಿಗೆ ಕಾರಣವಾಗುತ್ತಿದ್ದು ಕಾಟುಕುಕ್ಕೆ ಗ್ರಾಮದ ವಾಟೆ ಎಂಬಲ್ಲಿ ಮನೆ ಹಿಂಭಾಗದ ಗುಡ್ಡೆಯೊಂದು ಕುಸಿದು ಮನೆ ಪೂರ್ಣ ದ್ವಂಸವಾದ ಘಟನೆ ವರದಿಯಾಗಿದೆ.



ಇಲ್ಲಿನ ನಾರಾಯಣ ನಾಯ್ಕ ಎಂಬವರ ಮನೆಯಾಗಿದೆ ಸೋಮವಾರ ಮಧ್ಯಾಹ್ನ 2ಗಂಟೆಯ ವೇಳೆಗೆ ಬೀಸಿದ ಗಾಳಿ ಮಳೆಗೆ ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿರುವುದು.  ಈ ದುರಂತ ಸಂಭವಿಸುವ ವೇಳೆ ನಾರಾಯಣ ಮತ್ತು ಇವರ ಪತ್ನಿ ಹೊರಗಡೆ ಕೂಲಿ ಕೆಲಸಕ್ಕೆ ತೆರಳಿದ್ದು ಮನೆಯಲ್ಲಿ ಶಾಲೆಗೆ ತೆರಳುವ 11,ಹಾಗೂ 14 ವರ್ಷ ಪ್ರಾಯದ ಇಬ್ಬರು ಮಕ್ಕಳು ಮಾತ್ರ ಇದ್ದರೆನ್ನಲಾಗಿದೆ. ಗಾಳಿಗೆ ಹೆದರಿ ಮಕ್ಕಳು ಮನೆಯಿಂದ ಹೊರಗೋಡಿ ಬಂದಿರುವುದರಿಂದ ಅದೃಷ್ಟವಶಾತ್ ಜೀವಪಾಯದಿಂದ ಪಾರಾಗಿದ್ದಾರೆ. 

ಮನೆಯ ಹಿಂಬದಿಯ ಗುಡ್ಡ ಸಹಿತ ಬೃಹತ್ ಗಾತ್ರದ ಕಲ್ಲುಗಳು ಮನೆಯೊಳಗೆ ಬಿದ್ದಿದ್ದು ಶೀಟ್ ಹಾಕಿದ ಮನೆ ಮಾಡು ಸಂಪೂರ್ಣ ಹಾನಿಯಾಗಿದೆ.


ಸ್ಥಳಕ್ಕೆ ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.,ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್,ಜಯಶ್ರೀ ಕುಲಾಲ್, ಸಾಮಾಜಿಕ ಮುಂದಾಳು ಸುಧಾಕರ ಮಾಸ್ತರ್ ಮೊದಲಾದವರು ಭೇಟಿ ನೀಡಿದ್ದಾರೆ. ಯೂತ್ ಬ್ರಿಗ್ರೇಡ್ ಬಾಳೆಮೂಲೆ ಅವರು  ತಲುಪಿ‌ ಮನೆಯವರಾದ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.








Post a Comment

0 Comments