Ticker

6/recent/ticker-posts

ಮಂಜೇಶ್ವರ ತಾಲೂಕು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಘೋಷ್ ಪ್ರಮುಖ್ ಆಶೋಕ್ ಅಂಬಾರ್ ಹೃದಯಾಘಾತದಿಂದ ನಿಧನ


ಉಪ್ಪಳ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಜೇಶ್ವರ ತಾಲೂಕು ಘೋಷ್ ಪ್ರಮುಖ್, ಸಾಮಾಜಿಕ ಧಾರ್ಮಿಕ ಮುಂದಾಳು ಐಲ ಸಮೀಪದ  ಅಶೋಕ್ ಅಂಬಾರ್ (57) ಅವರು ಹೃದಯಾಘಾತದಿಂದ ಸೋಮವಾರ  ಸಂಜೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ತೀವ್ರ ಎದೆನೋವಿನಿಂದ ಬಳಲುತ್ತಿದ್ದ ಇವರನ್ನು ಉಪ್ಪಳ ಆಸ್ಪತ್ರೆಯ ಚಿಕಿತ್ಸೆಯ ಬಳಿಕ ಉನ್ನತ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆಯ ತಯಾರಿಯ ನಡುವೆ ಹೃದಯಾಘಾತ ಸಂಭವಿಸಿ ನಿಧನರಾಗಿರುವುದಾಗಿ ತಿಳಿದು ಬಂದಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯ ಶಿಕ್ಷಕ್ , ಮಂಜೇಶ್ವರ ಮಂಡಲ ಘೋಷ್‌ ಪ್ರಮುಖ್ ರಾಗಿ ಸೇವಾ ನಿರತರಾಗಿದ್ದ ಇವರು ಮಂಜೇಶ್ವರ ದೇವಾಂಗ ಸಮಾಜದ ಕಾರ್ಯದರ್ಶಿ, ಮಂಗಲ್ಪಾಡಿ ಏಕಾಹ ಭಜನಾ ಮಂದಿರದ ಟ್ರಸ್ಟಿ, ಶ್ರೀ ಚೀರುಂಬಾ ಭಗವತಿ ಕ್ಷೇತ್ರ ಚೆರುಗೋಳಿಯ ಪ್ರದಾನ ಕಾರ್ಯದರ್ಶಿ, ವೀರ ಕೇಸರಿ ವ್ಯಾಯಾಮ ಶಾಲೆ ಐಲ ನಿಕಟಪೂರ್ವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ ವಿದ್ಯಾ ಹಾಗೂ ಇರ್ವರು ಪುತ್ರಿಯರು,ಆಶಾ ಅನಿತಾ ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.

ಮೃತರ ಅಂತ್ಯಸಂಸ್ಕಾರ ನಾಳೆ (ಮಂಗಳವಾರ) ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Post a Comment

0 Comments