Ticker

6/recent/ticker-posts

ನಾರಾಯಣನ್ ಕಣ್ಣಾಲಯಂ ನಾಗರತ್ನ ಹೆಬ್ಬಾರ್ ಸಹಿತ ನಾಲ್ಕು ಮಂದಿಗೆ ಪ್ರಶಸ್ತಿ,


 ಕಾಸರಗೋಡು: ಪುಲರಿ ಅರವತ್ತ್ ಏರ್ಪಡಿಸಿದ ಪ್ರತಿಷ್ಠಿತ 'ವಿತ್ತಾಳ್'  ಪ್ರಶಸ್ತಿ ಘೋಷಿಸಲಾಗಿದೆ. ಸಸ್ಯಜನುಸ್ ವಿಭಾಗದ ಹಳಸಂಡೆ ಬೀಜ ಸಂರಕ್ಷಕ ಪೆರಿಯ ಆಯಂಬಾರೆಯ ನಾರಾಯಣನ್ ಕಣ್ಣಾಲಯಂ, ಭತ್ತ ಕೃಷಿ ವಿಭಾಗದಲ್ಲಿ  ರವೀಂದ್ರನ್ ಕೊಡಕ್ಕಾಡ್ ಎಂಬಿವರು ಪ್ರಶಸ್ತಿಗೆ ಅರ್ಹರಾದರು. ಜಂತು ಜನುಸ್ ವಿಭಾಗದಲ್ಲಿ ಆಲಕ್ಜೋಡ್ ನಲ್ಲಿರುವ ಗೋಕುಲಂ ಗೋಶಾಲೆಯ ನಾಗರತ್ನ ಹೆಬ್ಬಾರ್, ಅನಿವಾಸಿ ಪ್ರಶಸ್ತಿಗೆ ಮಿನಿ ಮಣಿಕಂಠನ್ ಅರ್ಹರಾದರೆಂದು ಕಾಸರಗೋಡು ಪ್ರೆಸ್ ಕ್ಲಬ್ಬಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ಜೂನ್ 29ರಂದು ಸಂಜೆ 3 ಗಂಟೆಗೆ ಸಂಸದ ರಾಜಮೋಹನ್ ಉಣ್ಣಿತ್ತಾನ್ ಪ್ರಶಸ್ತಿ ಪ್ರಧಾನ ಮಾಡುವರು. ಉದುಮ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಿ.ಲಕ್ಷ್ಮಿ ಅಧ್ಯಕ್ಷತೆ ವಹಿಸುವರು. ಕೇರಳ ರಾಜ್ಯ ಜೈವಿಕ ವೈವಿದ್ಯ  ನಿಗಮದ ಕಾರ್ಯದರ್ಶಿ ವಿ.ಬಾಲಕೃಷ್ಣನ್ ಮುಖ್ಯ ಅತಿಥಿಗಳಾಗಿರುವರು. ಉದುಮ ಗ್ರಾಮ ಪಂಚಾಯತು ಬಿ.ಎಂ.ಸಿ.ಯ ಸಹಕಾರದೊಂದಿಗೆ ನಾಟಿ ಕೃಷಿಕ ಪಾಠಶಾಲೆ ಹಮ್ಮಿಕೊಂಡಿದೆ.

Post a Comment

0 Comments