Ticker

6/recent/ticker-posts

Ad Code

ಎಣ್ಮಕಜೆ ಕೊರಗ ಉನ್ನತಿಯಲ್ಲಿ ಕೃಷಿ ಸಲಕರಣೆ ವಿತರಿಸಿ ಕಿಸಾನ್ ದಿವಸ್ ಆಚರಣೆ

 

ಪೆರ್ಲ: ಪುತ್ತೂರಿನ ಐಸಿಎಆರ್-ಗೇರು ಸಂಶೋಧನಾ ನಿರ್ದೇಶನಾಲಯವು  ಕಾಸರಗೋಡು ಜಿಲ್ಲೆಯ ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಕೊರಗ ಸಮುದಾಯದ  ಅಭಿವೃದ್ಧಿಗಾಗಿ ಡಿಸೆಂಬರ್ 23 ರಂದು 'ಕಿಸಾನ್ ದಿವಸ್' ಅಂಗವಾಗಿ ವಿಶೇಷ ತರಬೇತಿ ಮತ್ತು ಕೃಷಿ ಪರಿಕರ ವಿತರಣಾ ಕಾರ್ಯಕ್ರಮವನ್ನು ನಡೆಸಿತು.ಕಾಸರಗೋಡು ಬುಡಕಟ್ಟು ಅಭಿವೃದ್ಧಿ ಇಲಾಖೆ ಮತ್ತು ಕಾಸರಗೋಡು ಕೃಷಿ ವಿಜ್ಞಾನ ಕೇಂದ್ರದ  ಸಹಯೋಗದೊಂದಿಗೆ ನಡೆದ ಕಾರ್ಯಕ್ರಮವನ್ನು ಸಮುದಾಯದ ಜೀವನೋಪಾಯವನ್ನು ಸುಧಾರಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಂಚಾಯತ್ ಸದಸ್ಯೆ.  ಸೌದಾಬಿ ಹನೀಫ್ , ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಮುದಾಯದ ಅಭಿವೃದ್ಧಿಗೆ ಕೈಜೋಡಿಸುವಂತೆ ಕರೆ ನೀಡಿದರು.ಬುಡಕಟ್ಟು ವಿಸ್ತರಣಾ ಅಧಿಕಾರಿ  ವೀಣಾ, ಬುಡಕಟ್ಟು ಸಮುದಾಯಗಳು ಕೇವಲ ಸಾಂಪ್ರದಾಯಿಕ ವೃತ್ತಿಗೆ ಸೀಮಿತವಾಗದೆ, ಆಧುನಿಕ ಕೃಷಿ ಪದ್ಧತಿಗಳ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದರು

ವೈಜ್ಞಾನಿಕ ಕೃಷಿ ತರಬೇತಿ

ನಿರ್ದೇಶನಾಲಯದ ವಿಜ್ಞಾನಿ ಮತ್ತು ಟಿಎಸ್‌ಪಿ ನೋಡಲ್ ಅಧಿಕಾರಿ ಡಾ. ಅಶ್ವತಿ ಚಂದ್ರಕುಮಾರ್, ಸರ್ಕಾರದ "ವಿಕಸಿತ್ ಭಾರತ್ – ಗ್ಯಾರಂಟಿ ರೋಜ್‌ಗಾರ್ ಮತ್ತು ಅಜೀವನ್ ಮಿಷನ್" ಕುರಿತು ಮಾಹಿತಿ ನೀಡಿ, ವೈಜ್ಞಾನಿಕ ಗೇರು ಕೃಷಿ ಕ್ರಮಗಳ ಬಗ್ಗೆ ತರಬೇತಿ ನೀಡಿದರು. ಎಬಿಐ ಕೇಂದ್ರದ ಕುಮಾರಿ ದಿವ್ಯಾ ಶೇಖರ್ ಅವರು ಗೇರು ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಮತ್ತು ಅದಕ್ಕಿರುವ ಉದ್ಯಮಶೀಲತೆಯ ಅವಕಾಶಗಳನ್ನು ವಿವರಿಸಿದರು.

ಪರಿಕರಗಳ ವಿತರಣೆ:

ಕಾರ್ಯಕ್ರಮದ ಅಂಗವಾಗಿ ಸಮುದಾಯದ ಏಳು ಕುಟುಂಬಗಳಿಗೆ ಆದಾಯ ವೃದ್ಧಿಸಿಕೊಳ್ಳಲು ಸಹಕಾರಿಯಾಗುವಂತೆ ಚೈನ್ ಸಾ  ಸ್ಪ್ರೇಯರ್, ತೆಂಗಿನ ಮರ ಹತ್ತುವ ಉಪಕರಣ ಹಾಗೂ ಅಡಿಕೆ ಮರದ ಸ್ಪ್ರೇ ಹೋಸ್‌ಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ರೈತರು ಕೃಷಿ ಕಾರ್ಮಿಕರು ಮತ್ತು ಎಸ್‌ಟಿ ಪ್ರವರ್ತಕರು   ಪಾಲ್ಗೊಂಡಿದ್ದರು. ಅತ್ಯಂತ ಹಿಂದುಳಿದ ವರ್ಗಗಳ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ನಿರ್ದೇಶನಾಲಯವು ಈ ಕ್ರಮ ಕೈಗೊಂಡಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

Post a Comment

0 Comments