ಮಂಜೇಶ್ವರ : ಪಾವೂರು ನಾಗಬ್ರಹ್ಮ ವನದುರ್ಗ ಶಾಸ್ತಾರ ಕ್ಷೇತ್ರದ ವಾರ್ಷಿಕೋತ್ಸವದ ಅಂಗವಾಗಿ ಆಶ್ಲೇಷ ಪೂಜೆ ಮತ್ತು ನಾಗತಂಬಿಲ ನಡೆಯಿತು. ಕುಂಟಾರು ರವೀಶ ತಂತ್ರಿ ಅವರ ಆಶೀರ್ವಾದದೊಂದಿಗೆ ತಲಪಾಡಿ ದುರ್ಗಾಪರಮೇಶ್ವರಿ ಕ್ಷೇತ್ರದ ಗಣೇಶ್ ಭಟ್ ಅವರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಗಳು ನಡೆಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷ ಕೃಷ್ಣ ಶಿವಕೃಪಾ ಕುಂಜತ್ತೂರು ಉಪಾಧ್ಯಕ್ಷ ಗಣೇಶ್ ಪಾವೂರು ಕಾರ್ಯದರ್ಶಿ ಕಮಲಾಕ್ಷ ವಕೀಲರು ಮಂಗಳೂರು, ಕೋಶಾಧಿಕಾರಿ ಕೋಟಿಯಪ್ಪ ಪೂಜಾರಿ, ದಯಾನಂದ ಪಾವೂರು, ಶರ್ಮಿಳಾ ಮಂಗಳೂರು, ಸದಾಶಿವ ಕುಂಜತ್ತೂರು, ಉಮೇಶ ಕೊಪ್ಪಳ, ನಾರಾಯಣ ಕೊಪ್ಪಳ, ಜಯಪ್ರಕಾಶ್ ಕೊಪ್ಪಳ ಹಾಗೂ ಹಲವಾರು ಭಕ್ತಾದಿಗಳು ಉಪಸ್ಥಿತರಿದ್ದರು.

0 Comments