Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕುಡಿತದಿಂದ ಪಾಪಕರ್ಮ, ಮದ್ಯವರ್ಜನ ಶಿಬಿರದಿಂದ ಪುನರ್ಜನ್ಮ : ಗಣೇಶ್ ಆಚಾರ್ಯ

ಕುಂಬಳೆ : ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಂಜೇಶ್ವರ ತಾಲೂಕು ಇದರ ಸಂಯುಕ್ತ ಆಶ್ರಯದಲ್ಲಿ ಕಳತ್ತೂರು ಶ್ರೀ ಮಹಾದೇವ ಸಭಾ ಭವನದಲ್ಲಿ ಜರಗುತ್ತಿರುವ ಮದ್ಯ ವರ್ಜನಾ ಶಿಬಿರದ ನಾಲ್ಕನೇ ದಿನ ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಗುಂಪು ಮಾರ್ಗದರ್ಶನ ಹಾಗೂ ಮಾಹಿತಿ ಕಾರ್ಯಕ್ರಮ ನಡೆಸಿಕೊಟ್ಟರು.

ಮದ್ಯಪಾನ ಸೇರಿದಂತೆ ವಿವಿಧ ದುಶ್ಚಟಗಳಿಂದ ವ್ಯಕ್ತಿ, ಕುಟುಂಬ ಹಾಗೂ ಸಮಾಜದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ವಿವರಿಸಿದರು. ಜೊತೆಗೆ ದುಶ್ಚಟಗಳಿಂದ ಹೊರಬಂದು ಆರೋಗ್ಯಕರ ಹಾಗೂ ಮೌಲ್ಯಯುತ ಜೀವನ ನಡೆಸಲು ಅನುಸರಿಸಬಹುದಾದ ಸರಳ ಮತ್ತು ಪರಿಣಾಮಕಾರಿ ಮಾರ್ಗೋಪಾಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

"ಕುಡಿತದಿಂದ ಪಾಪಕರ್ಮ, ಮದ್ಯವರ್ಜನ ಶಿಬಿರದಿಂದ ಪುನರ್ಜನ್ಮ" ಎಂಬ ಸಂದೇಶದ ಮೂಲಕ ಶಿಬಿರಾರ್ಥಿಗಳಿಗೆ ಪ್ರೇರಣಾದಾಯಕ ಕೌನ್ಸಿಲಿಂಗ್ ನೀಡಿದ ಅವರು, ವ್ಯಸನಮುಕ್ತ ಜೀವನದ ಮಹತ್ವವನ್ನು ಮನದಟ್ಟು ಮಾಡಿದರು. ಅವರ ಮಾರ್ಗದರ್ಶನವು ಶಿಬಿರಾರ್ಥಿಗಳಲ್ಲಿ ಹೊಸ ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಬದುಕಿನ ಸಂಕಲ್ಪವನ್ನು ಮೂಡಿಸಿತು.

Post a Comment

0 Comments

ಜಾಹೀರಾತು

Responsive Advertisement