ಪೆರ್ಲ : ಪೆರ್ಲದ ಪಿ.ಸಿ.ರಸ್ತೆಯಲ್ಲಿರುವ ರೆಡಿಮೆಡ್ ಶಾಪ್ ವೊಂದರ ಆನ್ಯ ಮತೀಯ ಮಾಲಕ ಹಿಂದು ಹುಡುಗಿಯೋರ್ವೆಯನ್ನು ಮತಾಂತರ ಮಾಡಲೆತ್ನಿಸಿದನ್ನು ಪ್ರಶ್ನಿಸಲು ಹೋದ ಹಿಂದೂ ಯುವಕರು ಮತ್ತು ಅಂಗಡಿ ಮಾಲೀಕ ಹಾಗೂ ಆತನ ಪಾಲುದಾರನ ನಡುವೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ದಾಂಧಲೆ ಎಬ್ಬಿಸಿದ ಪ್ರಕರಣ ಇಂದು (ಮಂಗಳವಾರ) ಸಂಜೆ ಪೆರ್ಲ ಪೇಟೆಯಲ್ಲಿ ನಡೆದಿದೆ. ಪೆರ್ಲದ ಸಂಗೀತ ರೆಡಿಮೆಡ್ ಶಾಫ್ ನ ಮಾಲಕ ಹಿಂದೂ ಹುಡುಗಿಯೋರ್ವೆಯನ್ನು ದರ್ಗಾವೊಂದಕ್ಕೆ ಕರೆದು ಕೊಂಡೋಗಿ ಮತಾಂತರಕ್ಕೆ ಯತ್ನಿಸಿರುವುದನ್ನು ಪ್ರಶ್ನಿಸಲು ಯುವಕರ ಗುಂಪೊಂದು ಆಗಮಿಸಿ ದಾಂಧಲೆ ನಡೆಸಿತ್ತು. ಪರಸ್ಪರ ವಾಗ್ವಾದ ವಿಕೋಪಕ್ಕೆ ತಿರುಗಿ ಜನ ನೋಡು ನೋಡುತ್ತಿದ್ದಂತೆ ಆಗಮಿಸಿದ ತಂಡ ಹಲ್ಲೆ ನಡೆಸಿ ಪರಾರಿಯಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಬದಿಯಡ್ಕ ಪೋಲಿಸ್ ಠಾಣಾ ಎಸ್ ಐ ರೂಪೇಶ್, ಸರ್ಕಲ್ ಇನ್ಸ್ ಪೆಕ್ಟರ್ ಅನೂಫ್ ಕೃಷ್ಣ ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
.jpeg)
0 Comments