ಬದಿಯಡ್ಕ : ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಕುಂಬ್ಡಾಜೆ ಮಲ್ಲಮೂಲೆ ನಿವಾಸಿಯಾಗಿದ್ದು, ಬದಿಯಡ್ಕ ಚೆನ್ನಾರ್ಕಟ್ಟೆಯ ಬಾಡಿಗೆ ಕ್ವಾರ್ಟರ್ಸ್ನಲ್ಲಿ ವಾಸವಾಗಿದ್ದ ರೋಹಿಣಿ (36) ಮೃತಪಟ್ಟವರು.
ಭಾನುವಾರ ಮಧ್ಯಾಹ್ನ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು. ಮೃತರು ಪತಿ ಜಗದೀಶ್ ಅಮೆಕ್ಕಳ ಹಾಗೂ ಮಕ್ಕಳಾದ ಅಶ್ವಿನಿ, ಅಶ್ವತ್, ಭುವನೇಶ್ ಮತ್ತು ಭೂಮಿಕಾ ಅವರನ್ನು ಅಗಲಿದ್ದಾರೆ.

0 Comments