ಮಂಜೇಶ್ವರ : ದಾರಿ ಕೇಳುವ ನೆಪದಲ್ಲಿ ಬಂದು ಹಾಡಹಗಲೇ ಯುವತಿಯ ಕುತ್ತಿಗೆಯಿಂದ ಎರಡೂಕಾಲು ಪವನ್ ತೂಕದ ಚಿನ್ನದ ಸರ ಕಸಿದುಕೊಂಡ ಪ್ರಕರಣದಲ್ಲಿ ಓರ್ವನನ್ನು ಬಂಧಿಸಲಾಗಿದೆ. ಕುಂಬಳೆ ಬಂಬ್ರಾಣ ಮೂಲದ ಎ. ಸಂದೀಪ್ (31) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಈತನ ಸಹಚರನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ದ್ವಿಚಕ್ರ ವಾಹನದಲ್ಲಿ ಬಂದು ದಾರಿಕೇಳುವ ನೆಪದಲ್ಲಿ ಧರ್ಮಸ್ಥಳ ಸಂಘದ ನಗದು ಸಹಾಯಕಿ ನಯನ ಅವರ ಕೊರಳಿನಿಂದ ಚಿನ್ನದ ಸರ ಎಳೆದು ಪರಾರಿಯಾಗಿದ್ದರು. ಹೊಸಂಗಡಿಯ ಸರ್ವಿಸ್ ರಸ್ತೆಯಲ್ಲಿ ಸೋಮವಾರ ಈ ಘಟನೆ ನಡೆದಿತ್ತು.

0 Comments