ನೀರ್ಚಾಲ್ : ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಅಡುಗೆ ಕೆಲಸಗಾರ ನೀರ್ಚಾಲ್ ಮೇಲಿನ ಪೇಟೆ ನಿವಾಸಿ ಇಬ್ರಾಹಿಂ (64) ಅವರು ನಿಧನರಾದರು.
ಮಧುಮೇಹ ಸಂಬಂಧಿತ ಅನಾರೋಗ್ಯದಿಂದ ಬಳಲುತ್ತಿದ್ದ ಇಬ್ರಾಹಿಂ ಅವರನ್ನು ಕೆಲ ದಿನಗಳ ಹಿಂದೆ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ಸುಮಾರು 3.30ರ ವೇಳೆಗೆ ಉಸಿರಾಟದ ತೊಂದರೆಯಿಂದ ಅವರು ಕೊನೆಯುಸಿರೆಳೆದರು.
ಮೃತರು ಪತ್ನಿ ನಬೀಸಾ, ಪುತ್ರಿಯರಾದ ರಂಸೀನಾ, ಮರಿಯಮ್ಮ, ಸಫೀರಾ, ರಶೀದಾ, ಪುತ್ರ ನೌಫಲ್ ಅವರನ್ನು ಅಗಲಿದ್ದಾರೆ.

0 Comments