ಮುಳಿಯಾರು : ಕ್ಯಾಂಪ್ಕೋ ಸದಸ್ಯ ದಿ. ನಾರಾಯಣ ಕೆ. ಅವರ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಕ್ಯಾಂಪ್ಕೋ ವತಿಯಿಂದ 2 ಲಕ್ಷ ರೂ. ಧನಸಹಾಯವನ್ನು ಅವರ ನಿವಾಸಕ್ಕೆ ತೆರಳಿ ಹಸ್ತಾಂತರಿಸಲಾಯಿತು.
ಕ್ಯಾಂಪ್ಕೋದ ಸಾಂತ್ವನ (ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ) ಯೋಜನೆಯಡಿ ದಿ. ನಾರಾಯಣ ಕೆ. ಅವರಿಗೆ ಮುಳಿಯಾರ್ ಬ್ರಾಂಚ್ ಮುಖಾಂತರ ಮಂಜೂರಾದ 2,00,000 ರೂ. ಮೊತ್ತವನ್ನು ಕ್ಯಾಂಪ್ಕೋದ ಗೌರವಾನ್ವಿತ ನಿರ್ದೇಶಕರಾದ ಸತ್ಯನಾರಾಯಣ ಪ್ರಸಾದ್, ಸತೀಶ್ಚಂದ್ರ ಭಂಡಾರಿ, ಹಾಗೂ ಗಣೇಶ್ ಕುಮಾರ್ ಎ. ಪಾರಕಟ್ಟೆ ಅವರು ದಿ. ನಾರಾಯಣ ಕೆ. ಅವರ ಪತ್ನಿ ಉಷಾ ನಾರಾಯಣನ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬದಿಯಡ್ಕ ರೀಜನ್ ಚೀಫ್ ಮ್ಯಾನೇಜರ್ ಚಂದ್ರ ಎಂ., ಕ್ಯಾಂಪ್ಕೋ ಮುಳಿಯಾರು ಶಾಖಾ ವ್ಯವಸ್ಥಾಪಕರು ಹಾಗೂ ಕಾಸರಗೋಡು ಶಾಖಾ ವ್ಯವಸ್ಥಾಪಕರು ಉಪಸ್ಥಿತರಿದ್ದರು. ಸದಸ್ಯರ ಕುಟುಂಬದವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹೆಚ್ಚಿನ ಅಪ್ಡೇಟ್ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments