Ticker

6/recent/ticker-posts

Ad Code

ಬಿರುಸಿನ ಮಳೆ, ನಾಳೆ ರಾಜ್ಯದ 5 ಜಿಲ್ಲೆಗಳಲ್ಲಿ, ಸೋಮವಾರ 11 ಜಿಲ್ಲೆಗಳಲ್ಲಿ ರೆಡ್ ಅಲರ್ಟ್


 ತಿರುವನಂತಪುರಂ: ರಾಜ್ಯದಲ್ಲಿ  ನಾಳೆ (ಆದಿತ್ಯವಾರ) ಹಾಗೂ ಸೋಮವಾರ ಅತಿ ತೀವ್ರ ಮಳೆ ಬರಲಿದೆಯೆಂದು ಹವಾಮಾನ ಇಲಾಖೆ ವರದಿ ಮಾಡಿದೆ. ಇದರಂತೆ ನಾಳೆ (ಆದಿತ್ಯವಾರ) 5 ಜಿಲ್ಲೆಗಳಲ್ಲಿ ಹಾಗೂ ಸೋಮವಾರ 11 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕಾಸರಗೋಡು, ಕಣ್ಣೂರು, ವಯನಾಡ್, ಕೋಜಿಕ್ಕೋಡ್, ಮಲಪ್ಪುರಂ ಜಿಲ್ಲೆಗಳಲ್ಲಿ ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ. ತಿರುವನಂತಪುರಂ, ಕೊಲ್ಲಂ, ಆಲಪುಯ ಹೊರತು ಪಡಿಸಿ 11 ಜಿಲ್ಲೆಗಳಲ್ಲಿ (ಕಾಸರಗೋಡು ಸಹಿತ) ಸೋಮವಾರ ರೆಡ್ ಅಲರ್ಟ್ ಘೋಷಿಸಲಾಗಿದೆ.   ಇಂದು ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಆಗಿದ್ದು ವ್ಯಾಪಕ ಮಳೆ ಸುರಿಯುತ್ತಿದೆ. ಮಳೆಯ ಜತೆ ಗಾಳಿಯೂ ಬೀಸುತ್ತಿದ್ದು  ವಿವಿದೆಡೆ ನಾಶ ನಷ್ಟ ವರದಿಯಾಗಿದೆ

Post a Comment

0 Comments