ಕೊಳತ್ತಮಜಲು ನಿವಾಸಿ, ಪಿಕಪ್ ಚಾಲಕ ರಹೀಂ (35) (ಇಮ್ತಿಯಾಸ್) ಮೃತಪಟ್ಟರಾಗಿದ್ದಾರೆ. ಇವರ ಜತೆಗಿದ್ದ ಶಾಫಿ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಬಂಟ್ವಾಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಮದ್ಯಾಹ್ನ ಈ ಘಟನೆ ನಡೆದಿದೆ. ಪಿಕಪ್ ಚಾಲಕ ರಹೀಂ ಮನೆಯೊಂದರ ಬಳಿ ಮರಳು ಇಳಿಸಿ ವಾಪಾಸಾಗುವ ವೇಳೆ ದುಷ್ಕರ್ಮಿಗಳಿಂದ ತಲ್ವಾರು ದಾಳಿ ನಡೆದಿದೆಯೆಂದು ತಿಳಿದು ಬಂದಿದೆ.
0 Comments