ಕಾಸರಗೋಡು: ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟ ಕೇರಳದ ರಂಜಿತಾರನ್ನು ಫೇಸ್ ಬುಕ್ ಮೂಲಕ ಅವಮಾನಿಸಿದ ಡೆಪ್ಯುಟಿ ತಹಶೀಲ್ದಾರರನ್ನು ಸಸ್ಪೆಂಡ್ ಮಾಡಲಾಗಿದೆ. ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡು ತಾಲೂಕು ಡೆಪ್ಯುಟಿ ತಹಶಿಲ್ದಾರ್ ಪವಿತ್ರನನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಸಸ್ಪೆಂಡ್ ಮಾಡಲಾಗಿದೆ.
ಅಹಮದಾಬಾದ್ ವಿಮಾನ ದುರಂತದಲ್ಲಿ ಬ್ರಿಟನ್ ನಲ್ಲಿ ನರ್ಸ್ ಆಗಿರುವ ಪತ್ತನಂತಿಟ್ಟ ನಿವಾಸಿ ರಂಜಿತಾ ಮೃತಪಟ್ಟಿದ್ದರು. ಈಕೆಯ ಉದ್ಯೋಗ ಹಾಗೂ ಜಾತಿಯನ್ನು ಅವಮಾನಿಸಿ ಡೆಪ್ಯುಟಿ ತಹಶಿಲ್ದಾರ್ ಪವಿತ್ರನ್ ಫೇಸ್ ಬುಕ್ ಮೂಲಕ ಅವಮಾನಿಸಿದ್ದನು. ಇದು ರಾಜ್ಯಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು. ಈ ವಿಷಯವು ರಾಜ್ಯ ಕಂದಾಯ ಸಚಿವ ಕೆ.ರಾಜನ್ ಅವರ ಗಮನಕ್ಕೂ ಬಂತು. ಈ ಹಿನ್ನೆಲೆಯಲ್ಲಿ ಪವಿತ್ರನ್ ನನ್ನು ಸಸ್ಪೆಂಡ್ ಮಾಡಲಾಗಿದೆ. ಇದೇ ವ್ಯಕ್ತಿ ಈ ಹಿಂದೆ ಮಾಜಿ ಸಚಿವ, ಶಾಸಕ ಇ.ಚಂದ್ರಶೇಖರನ್ ಅವರನ್ನು ಫೇಸ್ ಬುಕ್ ಮೂಲಕ ನಿಂದಿಸಿದ್ದರು. ಇದಕ್ಕಾಗಿ 2024 ಸೆಪ್ಟೆಂಬರ್ ತಿಂಗಳಲ್ಲಿ ಜಿಲ್ಲಾಧಿಕಾರಿಗಳು ಸಸ್ಪೆಂಡ್ ಮಾಡಿದ್ದರು.
0 Comments