Ticker

6/recent/ticker-posts

Ad Code

ಮಧೂರು ಬಳಿ ನೀರಿನ ಸೆಳೆತಕ್ಕೆ ಸಿಲುಕಿ‌ ಜಾರಿ ಬಿದ್ದು ಕರಿಪೊಡಿ ನಿವಾಸಿ ಮೃತ್ಯು


 ಮಧೂರು:  ಇಲ್ಲಿನ ಪಟ್ಲದಲ್ಲಿ ನೀರಿನ ಸೆಳೆತದಲ್ಲಿ ಸಿಲುಕಿ  ಮುಳುಗಿ ಓರ್ವ ಮೃತಪಟ್ಟ ಘಟನೆ ನಡೆದಿದೆ. ಪಾಲಕುನ್ನು ಕೋಟಿಕುಳಂ ರೈಲು ನಿಲ್ದಾಣ ರಸ್ತೆಯ ಫಾಲ್ಕನ್ ಟೆಕ್ಸ್ಟೈಲ್ಸ್ ಮಾಲಕ ಕರಿಪೊಡಿ ನಿವಾಸಿ ಅಸೀಸ್ ಎಂಬವರ ಪುತ್ರ ಸಾದಿಕ್(39) ಮೃತಪಟ್ಟ ವ್ಯಕ್ತಿ. ಇಂದು (ಶುಕ್ರವಾರ) ಬೆಳಗ್ಗೆ ಈ ಘಟನೆ ನಡೆದಿದೆ. ಜತೆಗಿದ್ದ ಭಾವ ಮೊಯ್ದುವಿನ ಕೈ ಹಿಡಿದು ನಡೆದುಕೊಂಡು ಹೋಗಿದ್ದಾಗ ಕಾಲು ಜಾರು ನೀರು ತುಂಬಿದ ತೋಡಿಗೆ ಬಿದ್ದರೆನ್ನಲಾಗಿದೆ. ಬಿದ್ದ ರಭಸಕ್ಕೆ ನೀರಿನಲ್ಲಿ ಕೊಚ್ಚಿ ಹೋಗಿ ಅವರು ಮೃತಪಟ್ಟಿದ್ದಾರೆ.‌ಇವರು ದುಬಾಯಿಯ ಕಂಪನಿಯೊಂದರಲ್ಲಿ ದುಡಿಯುತ್ತಿದ್ದು ಒಂದು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು. ಮೃತರು ತಂದೆ, ತಾಯಿ  ಅಸ್ಮ, ಪತ್ನಿ‌ ಫರ್ಸಾನಾ,  ಮಕ್ಕಳಾದ ಫಾದಿಲ್ ಸೈನ್, ಸಿಯ ಫಾತಿಮ, ಆಮೀನ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

Post a Comment

0 Comments