Ticker

6/recent/ticker-posts

ಕುಂಬಳೆ ಪೇಟೆಯಿಂದ ಯುವಕನ ಅಪಹರಣಗೈದು 18 ಲಕ್ಷ ರೂ ದರೋಡೆಗೈದ ಪ್ರಕರಣ; ಉಪ್ಪಿನಂಗಡಿ, ಕಡಬ ನಿವಾಸಿಗಳ ಸೆರೆ


 ಕುಂಬಳೆ: ಇಲ್ಲಿನ ಪೇಟೆಯಲ್ಲಿ ಹಾಡುಹಗಲೇ ಯುವಕನನ್ನು ಕಾರಿನಲ್ಲಿ ಅಪಹರಣಗೈದು ಬೆದರಿಸಿ 1846127 ರೂ ದರೋಡೆಗೈದ ಪ್ರಕರಣದಲ್ಲಿ ಇಬ್ಬರನ್ನು  ಕುಂಬಳೆ ‌ಪೊಲೀಸರು ಬಂಧಿಸಿದ್ದಾರೆ. ಉಪ್ಪಿನಂಗಡಿ ನಿವಾಸಿ ಅನ್ಸೀಫ್(31), ಬಾಂದ್ರ, ಮರ್ದಾಲ ಕಡಬ ನಿವಾಸಿ ಇರ್ಫಾನ್(25) ಬಂಧಿತ ಆರೋಪಿಗಳು.  ಕುಂಬಳೆ ಇನ್ಸ್ಪೆಕ್ಟರ್ ಕೆ.ಪಿ.ವಿನೋದ್ ಕುಮಾರ್ ನೇತೃತ್ವದ ‌ಪೊಲೀಸರು ಪುತ್ತೂರಿನ ಅಡಗುತಾಣದಿಂದ ಇವರನ್ನು ಬಂಧಿಸಿದ್ದಾರೆ.  ಈ ಪ್ರಕರಣದ ಮುಖ್ಯ ಆರೋಪಿ ಪುತ್ತಿಗೆ ಚಳ್ಳಂಗಯ ನಿವಾಸಿ ಸಯ್ಯಿದ್(31( ನನ್ನು ಈ ಹಿಂದೆಯೇ ಬಂಧಿಸಲಾಗಿತ್ತು.

  ‌ಮೇ.6 ರಂದು ಅಪಹರಣ ಪ್ರಕರಣ ನಡೆದಿತ್ತು. ಮುಳಿಯಡ್ಕ ನಿವಾಸಿ ಅಬ್ದುಲ್ ರಶೀದ್(32) ಎಂಬಾತನನ್ನು ಕುಂಬಳೆ ಪೇಟೆಯಿಂದ ಅಪಹರಣ ಮಾಡಲಾಗಿತ್ತು ಅನಂತರ 18 ಲಕ್ಷ ರೂ ಪಡೆದು ಪೆರ್ಮುದೆ ಬಳಿ‌ ಉಪೇಕ್ಷಿಸಲಾಗಿತ್ತು.

Post a Comment

0 Comments