ಕುಂಬಳೆ : ತುಳುನಾಡ್ ಫಾರ್ಮರ್ಸ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿದ್ದ ಕೆ.ಎಸ್.ಅಬ್ದುಲ್ಲ ಅಸೀಸ್ ರಾಜಿನಾಮೆ ಸಲ್ಲಿಸಿದ ಹಿನ್ನಲೆಯಲ್ಲಿ ಕೇರಳ ಕೋಆಪರೇಟಿವ್ ಚುನಾವಣಾ ನಿರ್ದೇಶ ಪ್ರಕಾರ ಚುನಾವಣೆ ನಡೆಸಿ ನ್ಯಾ.ಪ್ರಕಾಶ್ ಅಮ್ಮಣ್ಣಾಯ ಅವರನ್ನು ಆಯ್ಕೆ ಮಾಡಲಾಗಿದೆ. ಚುನಾವಣಾ ಅಧಿಕಾರಿಯಾಗಿ ಬೈಜು ರಾಜು ಚುನಾವಣೆ ನಿರ್ವಹಿಸಿದ್ದರು. ಮಾಜಿ ಅಧ್ಯಕ್ಷ ಅಬ್ದುಲ್ ಅಸೀಸ್, ಸಿಬಿಐಎಂ ನೇತಾರ ರಘದೇವನ್ ಮಾಸ್ತರ್,ಏರಿಯಾ ಸಮಿತಿ ಕಾರ್ಯದರ್ಶಿ ಸುಬೈರ್ ಸಿ.ಎ, ಡಿ.ಸುಬ್ಬಣ್ಣ ಆಳ್ವ ಹಾಗೂ ನಿರ್ದೇಶಕರಾದ ಅಬ್ದುಲ್ ಲತೀಫ್, ಶಾಲಿನಿ.ಕೆ,ರಮಣಿ,ವಿನುತಾ, ನಾರಾಯಣ ಕೆ.ಮವ್ವಾರು, ರಾಜು ಸ್ಟೀಫನ್ ಡಿಸೋಜ, ಮುಹಮ್ಮದ್ ಆಶ್ರಫ್, ಮನೋಜ್ ಕುಮಾರ್ ಸಿ,ಕೃಷ್ಣಪ್ಪ ಪೂಜಾರಿ ಪಾಲ್ಗೊಂಡಿದ್ದರು. ಸೊಸೈಟಿ ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳು ನೂತನ ಸಮಿತಿಗೆ ಅಭಿನಂದನೆ ಸಲ್ಲಿಸಿದ್ದಾರೆ.
0 Comments