Ticker

6/recent/ticker-posts

ಕಾಸರಗೋಡು ಜಿಲ್ಲಾ ಬಂಟರ ಸಮ್ಮಿಲನ-2025 ಆಟಿಡ್ ಕೆಸರ್ಡ್ ಒಂಜಿ ದಿನ ಅಗಸ್ಟ್ 10 ರಂದು ಮಂಗಲ್ಪಾಡಿಯಲ್ಲಿ


ಉಪ್ಪಳ: ಡಾ.ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ಬಂಟರ ಸಮ್ಮಿಲನ-2025 ಕಾರ್ಯಕ್ರಮ ಅಗಸ್ಟ್ 10 ಆದಿತ್ಯವಾರದಂದು ಇತಿಹಾಸ ಪ್ರಸಿದ್ದ  ಮಂಗಲ್ಪಾಡಿ  ಮನೆಯ ಗದ್ದೆಯಲ್ಲಿ ಜರಗಲಿರುವುದು. ಆಟಿಡ್ ಕೆಸರ್ಡ್ ಒಂಜಿ ದಿನ ಎಂಬ ಈ ಕಾರ್ಯಕ್ರಮ ಅಂದು ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಕೆಸರು ಗದ್ದೆ, ಕ್ರೀಡಾ ಕೂಟ, ಮಕ್ಕಳಿಗೆ, ಮಹಿಳೆಯರಿಗೆ, ಸಾರ್ವಜನಿಕರಿಗೆ ವಿವಿದ ಸ್ಪರ್ದೆಗಳು, ಸಭೆ ಸಮಾರಂಭ ನಡೆಯಲಿದೆ. ಕಾರ್ಯಕ್ರಮದ ಪೂರ್ವ ಭಾವಿ ಸಭೆ ಇಂದು (ಆದಿತ್ಯವಾರ)  ಉಪ್ಪಳ ರಾಮಕೃಷ್ಣ ಶಾಲೆಯಲ್ಲಿ ಜರಗಿತು‌.


ಕಾರ್ಯಕ್ರಮವನ್ನು  ಕೊಡುಗೈದಾನಿ, ಉದ್ಯಮಿ ಡಾ.ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅವರು ಉದ್ಘಾಟಿಸಿದರು.  ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಐ.ಸುಬ್ಬಯ್ಯ ರೈ ಅಧ್ಯಕ್ಷತೆ ವಹಿಸಿದರು. ಶ್ರೀಮತಿ ಮೀರಾ ಆಳ್ವ ಪ್ರಾಸ್ತಾವಿಕ ಭಾಷಣ ಮಾಡಿದರು‌.  ಅನ್ನಪೂರ್ಣ ರೈ ಕಿದೂರು  ಪ್ರಾರ್ಥನೆ ಹಾಡಿದರು. ಬಂಟರ ಸಂಘದ ಜಿಲ್ಲಾ ಕಾರ್ಯದರ್ಶಿ ಮೋಹನ್ ರೈ ಕಯ್ಯಾರು ಸ್ವಾಗತಿಸಿದರು. ವಿಜಯ ಕುಮಾರ್ ರೈ ಕಾರ್ಯಕ್ರಮದ ವಿಶ್ಲೇಷಣೆ ಮಾಡಿದರು‌. ಕಾರ್ತಿಕ್ ಶೆಟ್ಟಿ ವಂದಿಸಿದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು, ಫಿರ್ಕ,ಪಂಚಾಯತು ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.








 

Post a Comment

0 Comments