ತಿರುವನಂತಪುರಂ: ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಇಂದು (ಆದಿತ್ಯವಾರ) ಉತ್ತರ ಕೇರಳದಲ್ಲಿ ಮಳೆ ತೀವ್ರವಾಗಲಿದೆ. ಇದರಿಂದಾಗಿ 7 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಅ್ ಘೋಷಿಸಲಾಗಿದೆ.
ಕಾಸರಗೋಡು, ಕಣ್ಣೂರು, ಕೋಜಿಕ್ಕೋಡ್, ಮಲಪ್ಪುರಂ, ತ್ರಿಶೂರ್, ಎರ್ನಾಕುಲಂ, ಆಲಪುಯ ಜಿಲ್ಲೆಗಳಲ್ಲಿ ಇಂದು ಎಲ್ಲೋ ಅಲರ್ಟ್ ಆಗಿದೆ. ಇದರ ಜಿಲ್ಲೆಗಳಲ್ಲಿ ಸಹ ಮಳೆ ಇರಲಿದೆ. ಕಾಸರಗೋಡು ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಮಳೆಯ ಜತೆ ಸಿಡಿಲು, ಮಿಂಚು ಕಾಣಿಸಿಕೊಳ್ಳಲಿದೆ. ಇಂದಿನಿಂದ (ಜೂನ್ 22) ಈ ತಿಂಗಳ 27 ರ ವರೆಗೆ ತೀವ್ರ ಮಳೆ ಇರುವುದು.
0 Comments