ಬದಿಯಡ್ಕ: ತೆಂಗಿನ ಕಾಯಿ ಕೊಯ್ಯಲು ಹೋಗಿ ನಾಪತ್ತೆಯಾದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಬಾಂಜತ್ತಡ್ಜ ಬಳಿಯ ಇಕ್ಕೇರಿ ನಿವಾಸಿ ವಿ.ವಿ.ಪ್ರಕಾಶನ್ ರ ಮೃತದೇಹ ಇಂದು (ಆದಿತ್ಯವಾರ) ಮದ್ತಾಹ್ನ ಇಕ್ಕೇರಿ ಬಳಿ ಹೊಳೆಯಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಮೇಲಕ್ಕೆತ್ತಿ ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗುವುದು. ಪೋಸ್ಟ್ ಮಾರ್ಟಂ ನಂತರ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟು ಕೊಡಲಾಗುವುದು.
ಜೂನ್ 18 ರಂದು ಮದ್ಯಾಹ್ನ 12.30 ಕ್ಕೆ ಪ್ರಕಾಶನ್ ನಾಪತ್ತೆಯಾಗಿದ್ದರು. ನೆರೆ ಮನೆಗೆ ತೆಂಗಿನಕಾಯಿ ಕೊಯ್ಯಲೆಂದು ಹೋದವರು ಅನಂತರ ಹಿಂತಿರುಗಿರಲಿಲ್ಲ. ಈ ಬಗ್ಗೆ ಪತ್ನಿ ಊರ್ವಶಿ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಕಾಞಂಗಾಡ್ ಬಳಿಯ ಅಂಬಲತ್ತರ ನಿವಾಸಿಯಾಗಿದ್ದಾರೆ
0 Comments