ಪೆರ್ಲ : ಡಿವೈಎಫ್ ಐ ಬೆದ್ರಂಪಳ್ಳ ಯೂನಿಟ್ ಸಮ್ಮೇಳನವು ಬೆದ್ರಂಪಳ್ಳ ಶಾಲೆಯಲ್ಲಿ ಜರಗಿತು.
ಜನಾರ್ಧನ ಕೆ. ಸಮ್ಮೇಳನದ ಧ್ವಜಾರೋಹಣಗೈದರು. ಡಿವೈಎಫ್ ಐ ಕುಂಬಳೆ ಬ್ಲೋಕ್ ಅಧ್ಯಕ್ಷ ರಂಜಿತ್ ಸಮ್ಮೇಳನ ಉದ್ಘಾಟಿಸಿದರು.ಯೂನಿಟ್ ಕಾರ್ಯದರ್ಶಿ ಸುಕುಮಾರನ್ ಕೆ ವರದಿ ಮಂಡಿಸಿದರು.ಈ ಸಂದರ್ಭದಲ್ಲಿ ನೂತನ ಸಮಿತಿ ಆಯ್ಕೆ ಮಾಡಲಾಯಿತು. ಪ್ರಕಾಶ್ ಕೆ ( ಅಧ್ಯಕ್ಷ) , ಯೋಗಿಶ್ ಕೆ (ಉಪಾಧ್ಯಕ್ಷ), ಜನಾರ್ಧನ ಕೆ.ಕಾರ್ಯದರ್ಶಿ ಆಗಿ ಆಯ್ಕೆಗೊಂಡರು. ಸಂಧ್ಯಾ ಕುಮಾರಿ ಜತೆ ಕಾರ್ಯದರ್ಶಿ ಹಾಗೂ ಇತರ ಐದು ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಜೆ ಮಾಡಲಾಯಿತು. ಸಂಧ್ಯಾಕೆ ಹುತಾತ್ಮ ವರದಿ ಮಂಡಿಸಿದರು. ನಿಶ್ಮಿತಾ ಸಂತಾಪ ಪ್ರಕಟಣೆ ವ್ಯಕ್ತಪಡಿಸಿದರು. ಸುಕುಮಾರ ಶೇಣಿ ಸ್ವಾಗತಿಸಿ ಪ್ರಕಾಶ್ ಕೆ ವಂದಿಸಿದರು.
0 Comments