Ticker

6/recent/ticker-posts

ನಿವೃತ್ತ ಅಂಚೆ ನೌಕರ,ರಂಗ ಕಲಾವಿದ ಬಾಬು ಬಂಗೇರ ನಿಧನ


ಕುಂಬಳೆ : ನಿವೃತ್ತ ಅಂಚೆ ನೌಕರ ಕಟ್ಟತಡ್ಕ ನೂತಗುರಿ ನಿವಾಸಿ ಬಾಬು ಬಂಗೇರ (74) ಹೃದಯಾಘಾತದಿಂದ ರವಿವಾರ ಸಂಜೆ ನಿಧನರಾದರು. 

ಅಂಚೆ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ  ಇವರು ಕುಂಬಳೆ ಅಂಚೆ ಕೇಂದ್ರ ಕಚೇರಿಯಲ್ಲಿ ಸಹಾಯಕ ನೌಕರರಾಗಿ  ಭಡ್ತಿಗೊಂಡು ನಿವೃತ್ತರಾಗಿದ್ದರು. 

ನಾಟಕ ಕಲಾವಿದರಾಗಿ ಗುರುತಿಸಿಕೊಂಡಿದ್ದ ಇವರು ರಂಗಭೂಮಿಯನ್ನು ಅತೀವ ಪ್ರೀತಿಸುವ ಸವ್ಯಸಾಚಿ ನಟರಾಗಿ ಪ್ರಸಿದ್ದಿ ಪಡೆದಿದ್ದರು. 

ಮಯೂರ ಕಳತ್ತೂರು ಹಾಗೂ ಎಸ್ ಕೆ ಎಸ್ ಪುತ್ತಿಗೆ ಇದರ ಸ್ಥಾಪಕ ಸದಸ್ಯರಲ್ಲಿ ಒರ್ವರಾಗಿರುವ ಇವರು ನಾಟಕ ಕಲಾವಿದರಾಗಿ, ನಿರ್ದೇಶಕರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡವರು.ಮೃತರು 

ಮಡದಿ ಸುನಂದ ಮಕ್ಕಳು ವಿನಯ ˌವಿಜಯ ' ವಿನೋದ್ ಅಳಿಯಂದಿರಾದˌಪೂವಪ್ಪ, ದಾಮೋಧರ  ಮೊಮ್ಮಕ್ಕಳಾದ ತಮನ್ವಿ, ಇಷಿಕ, ಜಸ್ವಿತ್, ಸಹೋದರಿಯರಾದ ಚಂದ್ರಾವತಿ, ಲೀಲಾವತಿ ಹಾಗೂ ಅಪಾರ ಬಂದು ಬಳಗವನ್ನಗಲಿದ್ದಾರೆ.

Post a Comment

0 Comments