ಅಡೂರು: ಸೋಲಾರ್ ಬೇಲಿ, ಬೀದಿ ದೀಪ, ಎಚ್ಚರಿಕೆ ನೀಡುವ ಫಲಕ ಸಹಿತ ವಿವಿದ ವ್ಯವಸ್ಥೆಗಳನ್ನು ಏರ್ಪಡಿಸಿ ಜನರ ಜೀವ ಹಾಗೂ ಸೊತ್ತುಗಳನ್ನು ರಕ್ಷಣೆ ನೀಡಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ಒತ್ತಾಯಿಸಿದ್ದಾರೆ. ಬಿಜೆಪಿ ದೇಲಂಪಾಡಿ ವಲಯ ಸಮಿತಿಯ ಆಶ್ರಯದಲ್ಲಿ ಅರಣ್ಯ ಇಲಾಖೆಯ ಡಿಪೋ ಪರಿಸರದಲ್ಲಿ ನಡೆದ ಧರಣಿ ಸತ್ಯಾಗ್ರಹ ಉದ್ಘಾಟಿಸಿ ಅವರು ಈ ರೀತಿ ಹೇಳಿದರು.
ಕಾಡುಪ್ರಾಣಿಗಳ ಹಾವಳಿಯಿಂದ ಕೃಷಿ ನಾಶಗೊಂಡರೆ ಸಣ್ಣ ಮಟ್ಟದ ನಷ್ಟ ಪರಿಹಾರ ಮಾತ್ರ ಲಭಿಸುತ್ತದೆ. ಕಾಡು ಪ್ರಾಣಿ ಹಾವಳಿ ಪ್ರದೇಶಗಳಿಗೆ ಉದುಮ ಶಾಸಕರು ಬೇಟಿ ನೀಡಲು ಮುಂದಾಗಬೇಕು ಎಂದವರು ಹೇಳಿದರು.
ಪಕ್ಷದ ದೇಲಂಪಾಡಿ ಏರಿಯ ಸಮಿತಿ ಅಧ್ಯಕ್ಷ ಉಮೇಶ್ ಗೌಡ ಅಧ್ಯಕ್ಷತೆ ವಹಿಸಿದರು. ಮುಳಿಯಾರು ಮಂಡಲ ಅಧ್ಯಕ್ಷ ದಿಲೀಪ್ ಪಳ್ಳಂಜಿ, ಚಂದ್ರಶೇಖರನ್, ಶಿವರಾಮ, ಉದಯ ಮೊದಲಾದವರು ಮಾತನಾಡಿದರು
0 Comments