ಉಪ್ಪಳ : ಸಂಘ ಪರಿವಾರದ ಬಿಜೆಪಿ ಜೊತೆಗಿನ ಸಂಬಂಧವನ್ನು ತ್ಯಜಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಬಗ್ಗೆ ಒಲವು ಬೆಳೆಸಿಕೊಂಡು ಪಕ್ಷಕ್ಕೆ ಸೇರ್ಪಡೆಗೊಂಡ ನಾಗರಾಜ ಹೇರೂರ್ ಅವರನ್ನು ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಶೇಣಿ ಸದಸ್ಯತ್ವ ನೀಡಿ ಸ್ವಾಗತಿಸಿದರು.
ಮಂಗಲ್ಪಾಡಿಯ ಅಂಬೇಡ್ಕರ್ ಭವನದಲ್ಲಿ ನಡೆದ ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಅವರು ರಾಜ್ಯ ಹಾಗೂ ದೇಶಿಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ತತ್ವಾದರ್ಶ ಧೋರಣೆಗಳ ಬಗ್ಗೆ ಜನತೆ ಆಸಕ್ತಿಯುತರಾಗಿದ್ದು ಇದು ಗ್ರಾಮ ಪಂಚಾಯತು ಮಟ್ಟವನ್ನು ಶಕ್ತಿ ಕೇಂದ್ರವನ್ನಾಗಿಸಲು ಸಾಧ್ಯವಾಗಿಸಬಹುದೆಂದು ಅಭಿಪ್ರಾಯಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮಂಗಲ್ಪಾಡಿ ಮಂಡಲ ಅಧ್ಯಕ್ಷರಾಗಿ ಆಯ್ಕೆಯಾದ ಮುಹಮ್ಮದ್ ಮಾಲಂತೂರು ನ್ನು ಅಭಿನಂದಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಾಬು ಬಂದಿಯೋಡು ವಹಿಸಿದ್ದರು. ಯುಡಿಎಎಫ್ ಸಂಚಾಲಕ ಮಂಜುನಾಥ ಆಳ್ವ, ಕಾಂಗ್ರೆಸ್ ಮಂಜೇಶ್ವರ ಬ್ಲಾಕ್ ಅಧ್ಯಕ್ಷ ಡಿಎಂಕೆ ಮೊಹಮ್ಮದ್, ಮಾಜಿ ಕುಂಬಳೆ ಬ್ಲಾಕ್ ಅಧ್ಯಕ್ಷ ಲಕ್ಷ್ಮಣ ಪ್ರಭು, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಫಾರೂಕ್ ಶಿರಿಯಾ,ಮಂಡಲ ಉಪಾಧ್ಯಕ್ಷ ಅಶ್ರಫ್ ಮುಟ್ಟಂ, ಕಾರ್ಯದರ್ಶಿ ಜಾಬಿದ್ ಮುಟ್ಟಂ, ಗೀತಾ ಬಂದಿಯೋಡು,ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ತಾಹಿರಾ, ಮಂಡಲ ಅಧ್ಯಕ್ಷ ಶಿಹಾಬುದ್ದೀನ್ ಮೊದಲಾದವರು ಮಾತನಾಡಿದರು.
ನಿಲಂಬೂರು ಉಪ ಚುನಾವಣೆಯಲ್ಲಿ ಐಕ್ಯರಂಗದ ಭರ್ಜರಿ ಗೆಲುವಿಗಾಗಿ ವಿಜಯೋತ್ಸವ ಮೆರವಣಿಗೆ ನಡೆಯಿತು.ನೂರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು
0 Comments