Ticker

6/recent/ticker-posts

ಮಾಣಿಮೂಲೆ ತರವಾಡು ಮನೆಯ ಧೂಮಾವತಿ ದೈವಸ್ಥಾನದ ಪ್ರಧಾನ ಅರ್ಚಕರಾಗಿ ಸಂಜೀವ ಕೊಲ್ಲಂಗಾನರಿಗೆ ಚಿನ್ನದ ಬಳೆ ತೊಡಿಸುವ ಕಾರ್ಯಕ್ರಮ


 ಮಾಣಿಮೂಲೆ ತರವಾಡುಮನೆಯ ದೂಮಾವತಿ ದೈವಸ್ಥಾನದ ಪ್ರಧಾನ ಅರ್ಚಕ (ಪೂಜಾರಿ) ರಾಗಿ ಶ್ರೀ ಸಂಜೀವ ಪೂಜಾರಿ ಕೊಲ್ಲಂಗಾನ  ಇಂದು ಮಧ್ಯಾಹ್ನ 12.15ರ ಸುಮುಹೂರ್ತದಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿವರ್ಯರ ಉಪಸ್ಥಿತಿಯಲ್ಲಿ, ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ಶ್ರೀ ರವೀಶತಂತ್ರಿವರ್ಯರ ಕಾರ್ಮಿಕತ್ವದಲ್ಲಿ ಕುಂಟಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಚಿನ್ನದ ಬಳೆ ತೊಡಿಸುವ ಕಾರ್ಯಕ್ರಮವು ಜರುಗಿತು. ಈ ಕಾರ್ಯಕ್ರಮವು ವಿವಿಧ ಪೂಜಾರಿ ಮನೆತನದ ತರವಾಡು ದೈವಸ್ಥಾನಪ್ರಧಾನ ಅರ್ಚಕರ (ಪೂಜಾರಿ) ಉಪಸ್ಥಿತಿಯಲ್ಲಿ ಜರುಗಿತು. ಮಾಣಿಮೂಲೆ ತರವಾಡು ದೈವಸ್ಥಾನದ ಅಧ್ಯಕ್ಷರು, ಕಾರ್ಯದರ್ಶಿ, ಹಾಗೂ ಸಮಿತಿಯ ಸದಸ್ಯರುಗಳು, ಮತ್ತು ಧಾಮಿ೯ಕ ಮುಂದಾಳುಗಳು ಉಪಸ್ಥಿತರಿದ್ದರು. ಅದಲ್ಲದೆ ಖ್ಯಾತನ್ಯಾಯವಾದಿ ಶ್ರೀಯಂ ನಾರಾಯಣ ಭಟ್, ಮಧೂರು ಗ್ರಾಮ ಪಂಚಾಯತು ಅಧ್ಯಕ್ಷರು, ಪಂಚಾಯತು ಸದಸ್ಯರುಗಳು ಮಾಜಿ ಅಧ್ಯಕ್ಷರು, ಮಧೂರು ಸಹಕಾರೀ ಸೊಸೈಟಿಯ ಅಧ್ಯಕ್ಷರು, ಕಾರ್ಯದರ್ಶಿ, ಸಿಬಂದಿಗಳು ಉಪಸ್ಥಿತರಿದ್ದರು.

Post a Comment

0 Comments