Ticker

6/recent/ticker-posts

ಮೀಯಪದವು ಶ್ರೀ ವಿದ್ಯಾವರ್ಧಕ ಪ್ರೌಢ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ


 ಮೀಯಪದವು ಶ್ರೀ ವಿದ್ಯಾವರ್ಧಕ ಪ್ರೌಢ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ಶಾಲಾ ಸಂಚಾಲಕ ಡಾ. ಜಯಪ್ರಕಾಶ್ ನಾರಾಯಣ ತೊಟ್ಟಿತ್ತೋಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡುತ್ತಾ ಯೋಗವು ಜಗತ್ತಿಗೆ ಭಾರತದ ಅಮೂಲ್ಯ ಕೊಡುಗೆಯಾಗಿದ್ದು. ಪ್ರಸ್ತುತ ಕಾಲಘಟ್ಟದಲ್ಲಿ ಯೋಗದ ಜನಪ್ರಿಯತೆ ಮುನ್ನಲೆಗೆ ಬಂದಿದೆ. ಮನುಷ್ಯನ ಜೀವನ ಕ್ರಮ ಹಳಿ ತಪ್ಪಿದ್ದು ಸ್ವಾಸ್ಥ್ಯ ಹಾಗೂ ಆರೋಗ್ಯ ಪೂರ್ಣ ಬದುಕು ಕಟ್ಟಿಕೊಳ್ಳಲು ಯೋಗಾಭ್ಯಾಸ ಅತಿ ಅವಶ್ಯಕ ಎಂದು ಅಭಿಪ್ರಾಯ ಪಟ್ಟರು.ಯೋಗ ಗುರು ಮಂಗಳೂರು ವಿಶ್ವವಿದ್ಯಾಲಯದ ಮಾನವ ಪ್ರಜ್ಞೆ ಹಾಗೂ ಯೋಗ ವಿಜ್ಞಾನ ವಿಭಾಗದ ಉಪನ್ಯಾಸಕ ಶ್ರೀ ವಿನಾಯಕ ಕೃಷ್ಣ ಅವರು ಮಕ್ಕಳಿಗೆ ಯೋಗ ಹಾಗೂ ಪ್ರಾಣಾಯಾಮಗಳ ಕ್ರಮ ಬದ್ಧ ಬಳಕೆಯಿಂದ ಮಾನವನ ಒತ್ತಡ ಜೀವನ ಹಗುರವಾಗಬಲ್ಲದು. ಇಂದಿನ ಮಕ್ಕಳು ಎಳವೆಯಲ್ಲಿ ಎದುರಿಸುವ ಅನೇಕ ತೆರನಾದ ಸಮಸ್ಯೆಗಳಿಗೆ ಯೋಗಾಭ್ಯಾಸ ದಿವ್ಯ ಔಷಧ ಎಂದು ಅಭಿಪ್ರಾಯಪಟ್ಟರು.ಶಾಲಾ ಪ್ರಾಂಶುಪಾಲ ಶ್ರೀ ರಮೇಶ ಕೆ ಎನ್, ಪ್ರಭಾರ ಮುಖ್ಯ ಶಿಕ್ಷಕ ಶ್ರೀ ಕಿರಣ್ ಕೆ ಎನ್ ಹಾಗೂ ದೈಹಿಕ ಶಿಕ್ಷಕ ಗ್ಯಾರಿ ಗಿಮ್ಮೋರ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕನ್ನಡ ಅಧ್ಯಾಪಕ ರಾಜಾರಾಮ್ ಸ್ವಾಗತಿಸಿದರು. ಕನ್ನಡ ಅಧ್ಯಾಪಕಿ ಶ್ರೀಮತಿ ಸುಧಾ ಕೆ ಎಂ ಧನ್ಯವಾದಗಳನ್ನಿತ್ತರು.ಸಂಸ್ಕೃತ ಅಧ್ಯಾಪಕ ಡಾ. ವಿಷ್ಟೇಶ್ ಶರ್ಮ ನಿರೂಪಿಸಿದರು.ಯೋಗ ಗುರು ವಿನಾಯಕ ಕೃಷ್ಣ ಅವರು ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಹಲವು ಯೋಗ ಭಂಗಿಗಳ ಪ್ರಾತ್ಯಕ್ಷಿಕೆ ತರಬೇತಿ ನೀಡಿದರು.

Post a Comment

0 Comments