Ticker

6/recent/ticker-posts

ಬದಿಯಡ್ಕ ಪೇಟೆಯಲ್ಲಿ ಪರಸ್ಪರ ಹೊಡೆದಾಟ ನಡೆಸಿದ ಮಣ್ಣು ಮಾಫಿಯ ತಂಡ, ಓರ್ವನಿಗೆ ಗಂಭೀರ ಗಾಯ


 ಬದಿಯಡ್ಕ: ಇಲ್ಲಿನ ಪೇಟೆಯಲ್ಲಿ ಮಣ್ಣು ಮಾಫಿಯಾ ತಂಡ ಪರಸ್ಪರ ಹೊಡೆದಾಟ ನಡೆಸಿದ ಬಗ್ಗೆ ವರದಿಯಾಗಿದೆ. ಹೊಡೆದಾಟದಲ್ಲಿ ಮಾವಿನಕಟ್ಟೆ ಪುಳಿಯಡಿ ನಿವಾಸಿ ಅಶ್ರಫ್ ಗಾಯಗೊಂಡಿದ್ದು ಈತನನ್ನು ಚೆರ್ಕಳ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು (ಬುದವಾರ) ಮುಂಜಾನೆ 3 ಗಂಟೆಯ ವೇಳೆ ಈ ಘಟನೆ ನಡೆದಿದೆ. ವಿದ್ಯಾಗಿರಿ, ಮುನಿಯೂರು, ನೆಕ್ರಾಜೆ ನಿವಾಸಿಗಳಾದ ಮೂರು ಮಂದಿಯ ನೇತೃತ್ವದಲ್ಲಿ ಬದಿಯಡ್ಕ ಪೊಲೀಸ್ ಠಾಣಾ ಪರಿಸರದಿಂದ  ಅನಿಧಿಕೃತವಾಗಿ‌ ಮಣ್ಣು ಸಾಗಿಸುತ್ತಿದೆ ಎಂದು ಆರೋಪಿಸಲಾಗಿದೆ. ಬದಿಯಡ್ಕ ಪೊಲೀಸ್ ಠಾಣೆಯ ಇಬ್ಬರು ಪೊಲೀಸರ ಸಹಕಾರದೊಂದಿಗೆ ರಾತ್ರಿ ಹಗಲೆನ್ನದೆ ಮಣ್ಣು ಸಾಗಾಟ ನಡೆಯುತ್ತಿದೆ ಎನ್ನಲಾಗಿದೆ.  ಈ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಓರ್ವ ಪೊಲೀಸನನ್ನು ಮಂಜೇಶ್ವರ ಠಾಣೆಗೆ ವರ್ಗಾಯಿಸಲಾಗಿತ್ತು.ಆದರೆ ಈತ ಈಗಲೂ ಬದಿಯಡ್ಕದಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಈ ಇಬ್ಬರು ಪೊಲೀಸರನ್ನು ಖಾಸಗಿಯಾಗಿ ಬೇಟಿಯಾದರೆ ಮಣ್ಣು ಸಾಗಾಟ ನಡೆಸಬಹುದು ಎಂದು ಮಣ್ಣು ಮಾಫಿಯ ಹೇಳುತ್ತಿದೆ.

 ‌ನಿನ್ನೆ (ಮಂಗಳವಾರ) ರಾತ್ರಿ 8 ಗಂಟೆಯಿಂದ ಪಿಲಾಂಕಟ್ಟೆಯಿಂದ ಬದಿಯಡ್ಕ ಬೋಳುಕಟ್ಟೆ ಭಾಗಕ್ಕೆ ಮಣ್ಣು ಸಾಗಿಸಲಾಗುತ್ತಿತ್ತು. ಈ ಮಾಹಿತಿಯನ್ನು ಅಶ್ರಫ್ ಪೊಲೀಸರಿಗೆ ನೀಡಿದನೆಂದು ಆರೋಪಿಸಿ  ಹಲ್ಲೆಗೈಯ್ಯಲಾಗಿದೆ. ತಲೆಗೂ ಎದೆ ಎಲುಬಿಗೂ ಗಾಯವಾಗಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ.

Post a Comment

0 Comments