Ticker

6/recent/ticker-posts

Ad Code

ಡಿಸೆಂಬರ್ 26ಕ್ಕೆ ಮುಡಿಮಾರು ನೇಮೋತ್ಸವ

 

ಪಾವೂರು: ಮುಡಿಮಾರ್ ಶ್ರೀ ಮಲರಾಯ ಗುಳಿಗ ದೈವಸ್ಥಾನದಲ್ಲಿ ವಾರ್ಷಿಕ ಶ್ರೀ ಮಲರಾಯ ಮತ್ತು ಗುಳಿಗ ನೇಮೋತ್ಸವವು ಡಿ. 26ರಂದು ಶುಕ್ರವಾರ ನಡೆಯಲಿದೆ. ಅಂದು ಬೆಳಿಗ್ಗೆ ಗಣಪತಿ ಹೋಮ, ಶುದ್ಣಿ ಕಲಶ, ಮಹಾಪೂಜೆ ,ಅನ್ನಸಂತರ್ಪಣೆ ನಡೆದು ಮಧ್ಯಾಹ್ನ 2 ಗಂಟೆಗೆ ಶ್ರೀ ಮಲರಾಯ ನೇಮೋತ್ಸವವು ನಡೆಯಲಿದೆ. ನಂತರ ಸಂಜೆ ಐದು ಗಂಟೆಗೆ ಗುಳಿಗ ನೇಮೋತ್ಸವ ತದನಂತರ ರಾತ್ರಿ 8 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸ್ಥಳೀಯ ಮಕ್ಕಳಿಂದ ನೃತ್ಯಾವಳಿ, ಬಳಿಕ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ವೇದಿಕೆಯಲ್ಲಿ ಸನ್ಮಾನ ಕಾರ್ಯಕ್ರಮವು ಶ್ರೀ ಕೃಷ್ಣ ಶಿವಕೃಪ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾವೂರು ಪೊಯ್ಯೆ ಚಾಮುಂಡೇಶ್ವರಿ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಮನೋಹರ ಶೆಟ್ಟಿ ಕೆದುಂಬಾಡಿ, ಶ್ರೀ ಮಲರಾಯ ಕ್ಷೇತ್ರದ ಪ್ರಧಾನ ಅರ್ಚಕ ಚಂದ್ರಹಾಸ ಪೂಜಾರಿ, ದರ್ಶನ ಪಾತ್ರಿ ಅರಸ ಪೂಜಾರಿ ಕುದುಕೋರಿ, ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಮುಡಿಮಾರು ಇದರ ಅಧ್ಯಕ್ಷ ಚಂದ್ರಹಾಸ ಕೆದುಂಬಾಡಿ, ಇವರು ಉಪಸ್ಥಿತರಿರುವರು. ಸಭೆಯಲ್ಲಿ ಗಡಿನಾಡ ಕಲಾನಿಧಿ ಕೃಷ್ಣ.ಜಿ .ಮಂಜೇಶ್ವರ,  ಸು ಪ್ರಂ ಸೋ ಚಲನಚಿತ್ರದ ಭಾವ ಬಂದರು ಖ್ಯಾತಿಯ ಪುಷ್ಪರಾಜ್ ಬೊಳ್ಳಾರ್, ಜೂನಿಯರ್ ರಾಷ್ಟ್ರೀಯ ಕಬಡಿ ತಂಡದ ಸದಸ್ಯ (ಕರ್ನಾಟಕ) ಸುಮುಖ್ ತಚ್ಚಾನಿ ತಲಪಾಡಿ, ಚರಿಷ್ಮಾ ರಾಕೇಶ್ ಅಂಚನ್ ಮುಡಿಮಾರ್ (ಜೂನಿಯರ್ ರಾಷ್ಟ್ರೀಯ ಕಬಡಿ ತಂಡದ ಸದಸ್ಯೆ ಕೇರಳ) ಇವರನ್ನು ಸನ್ಮಾನಿಸಲಾಗುವುದು. ನಂತರ ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಮುಡಿಮಾರು ಇದರ ಪ್ರಯೋಜಕತ್ವದಲ್ಲಿ ಶಾರದ ಆರ್ಟ್ಸ್ ತಂಡದ ಐಸಿರಿ ಕಲಾವಿದರಿಂದ "ಜೈ ಭಜರಂಗಬಲಿ " ಎಂಬ ತುಳು ಸಾಮಾಜಿಕ ನೀತಿ ಬೋಧಕ ನಾಟಕ ನಡೆಯಲಿದೆ.

Post a Comment

0 Comments