Ticker

6/recent/ticker-posts

Ad Code

ಬೆಂಕಿ ಆಕಸ್ಮಿಕ ಸಂಭವಿಸಿದ ಕುಟುಂಬಕ್ಕೆ ರಾಜ ಬೆಳ್ಚಪ್ಪಾಡ ಬಳಗದ ತುರ್ತು ಸ್ಪಂದನೆ

 


ಕಾಸರಗೋಡು : ಬೆಂಕಿ ಅವಘಡದಿಂದ ಮನೆ ಉರಿದು ತೀರ ನಾಶನಷ್ಟಕ್ಕೆ ಒಳಗಾದ ಕಾಸರಗೋಡು ಕೊಳಕೆಬೈಲ್ ನಿವಾಸಿ ಪುಷ್ಪ ಗಣಪತಿ ಆಚಾರ್ಯ ಅವರ ಮನೆಗೆ ಮಂಜೇಶ್ವರದ ರಾಜ ಬೆಳ್ಚಪ್ಪಾಡ ಸೇವಾ ಟ್ರಸ್ಟ್ ಉದ್ಯಾವರ ಮಾಡ  ಇದರ ಪದಾಧಿಕಾರಿಗಳು   ಬೇಟಿ ನೀಡಿ ಸಾಂತ್ವನ ನುಡಿದರು. 

ಈ ಸಂದರ್ಭದಲ್ಲಿ ಮನೆಗೆ ದಿನಸಿ ಸಾಮಾಗ್ರಿಗಳ ಸಹಿತ ಬಟ್ಟೆ, ಮಕ್ಕಳ ಕಲಿಕೆಗೆ ಬೇಕಾದ  ಪುಸ್ತಕ ಇವುಗಳನ್ನು  ನೀಡಲಾಯಿತು.ಸ್ಥಳೀಯ ಶಾಸಕ ಎನ್.ಎ.ನೆಲ್ಲಿಕುನ್ನು ಈ ಸಂದರ್ಭ ಭೇಟಿ ನೀಡಿ ಸ್ಥಿತಿಗತಿ ಅವಲೋಕಿಸಿದರು.

ಟ್ರಸ್ಟ್ ನ‌ ಮುಖ್ಯಸ್ಥರಾದ ರಾಜ ಬೆಳ್ಚಪ್ಪಾಡ,  ಹರೀಶ್ ಮೇಘ ಕ್ಯಾಟರರ್ಸ್,  ನಳಿನಾಕ್ಷ ಆಚಾರ್ಯ,ಜಯರಾಜ್ ಶೆಟ್ಟಿ ಕುಳೂರು, ತುಳಸಿದಾಸ್ ಮಂಜೇಶ್ವರ,ಅನುಷ್ ಕುಮಾರ್  ದೇರಂಬಳ,ಕಿಶೋರ್ ಸುವರ್ಣ ಕಾಸರಗೋಡು,ಸುಪ್ರೀತ ಅನುಷ್ ದೇರಂಬಳ,ವಾರ್ಡು ಕೌನ್ಸಿಲರ್ ಹರೀಶ್ ಕೆ.ಆರ್ ಮುಂತಾದವರು ಇದ್ದರು.

Post a Comment

0 Comments