ಉಪ್ಪಳ : ಸೋಂಕಾಲು ಸಮೀಪದ ಶಾಂತಿಗುರಿಯ ಸೌಂಡ್ಸ್ ಲೈಟಿಂಗ್ ಕಾರ್ಮಿಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಕರುಣಾಕರನ್ ಮತ್ತು ಸುಂದರಿ ಅವರ ಪುತ್ರ ಶಶಿಕುಮಾರ್ (19) ಮೃತ ಯುವಕ.
ಭಾನುವಾರ ಬೆಳಗ್ಗೆ ಮನೆಯೊಳಗೆ ಕಾಣದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಮನೆಯ ಹಿಂದೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹವನ್ನು ಮಂಗಲ್ಪಾಡಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.ಮೃತರು ತಂದೆ ತಾಯಿ ಹಾಗೂ ಸಹೋದರರಾದ ಕೌಶಿಕ್ ಮತ್ತು ಸುಶಾಂತ್ ಎಂಬಿವರನ್ನಗಲಿದ್ದಾರೆ.

0 Comments