Ticker

6/recent/ticker-posts

Ad Code

ಅರ್ಜಾಲು ಶ್ರೀಧೂಮಾವತಿ ದೈವಸ್ಥಾನದ ನವೀಕರಣ ಬ್ರಹ್ಮಕಲಶೋತ್ಸವ : ಎಡನೀರು ಶ್ರೀಗಳಿಗೆ ಆಮಂತ್ರಣ

 

ಕಾಸರಗೋಡು : ಅರ್ಜಾಲು ಶ್ರೀಧೂಮಾವತಿ  ದೈವಸ್ಥಾನದ ನವೀಕರಣ ಬ್ರಹ್ಮಕಲಶೋತ್ಸವ ಹಾಗೂ ಧರ್ಮನೇಮ ಮಾ.26ರಿಂದ 29ರ ತನಕ ಜರಗಲಿದೆ.  ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ಎಡನೀರು ಮಠಕ್ಕೆ ತೆರಳಿ ಎಡನೀರು ಸಂಸ್ಥಾನದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರಿಗೆ  ನೀಡಿ ಆಶೀರ್ವಾದ, ಮಂತ್ರಾಕ್ಷತೆ ಪಡೆದು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ತರವಾಡಿನ ಹಿರಿಯವರಾದ ಸಂಜೀವ ರೈ ಅರ್ಜಾಲ್, ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ದೇರಣ್ಣ ರೈ ಪುತ್ರಕಳ, ಕಾರ್ಯದರ್ಶಿ ಸಂತೋಷ್ ಕುಮಾರ್ ರೈ ಗಾಡಿಗುಡ್ಡೆ,ಕೋಶಾಧಿಕಾರಿ ಆಶೋಕ್ ರೈ ಅರ್ಜಾಲ್, ಸೇವಾ ಟ್ರಸ್ಟ್ ನ‌ ಕಾರ್ಯದರ್ಶಿ ಸುಬ್ಬಣ್ಣ ರೈ ಅರ್ಜಾಲ್ ಉಪಸ್ಥಿತರಿದ್ದರು.

Post a Comment

0 Comments