ಮಂಜೇಶ್ವರ : ಪಾವೂರು ಪೊಯ್ಯೆ ಶ್ರೀ ಚಾಮುಂಡೇಶ್ವರಿ ದೈವಸ್ಥಾನದ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀಚಾಮುಂಡೇಶ್ವರಿ ಭಜನಾ ಮಂಡಳಿ ವತಿಯಿಂದ 57ನೇ ಏಕಾಹ ಭಜನಾ ಕಾರ್ಯಕ್ರಮ ನಡೆಯಿತು. ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷರಾದ ಮನೋಹರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ತ್ಯಾoಪಣ್ಣ ಶೆಟ್ಟಿ ಮುಟ್ಲ, ರವಿ ಮುಡಿಮಾರ್, ನಾಗೇಶ್ ಬಲ್ಲೂರ್ ವಿನೋದ್ ಪಾವೂರು, ಶಿವಕುಮಾರ್ ಬಳ್ಳೂರ್, ಶಿವ ಕೊಪ್ಪಳ, ಗಣೇಶ್ ಪಾವೂರು, ಮೋನಪ್ಪ ಶೆಟ್ಟಿ ಮುಟ್ಲ, ಸಮಿತಿ ಸದಸ್ಯರು ಉಪಸ್ಥಿತರಿದ್ದರು ನೂರಾರು ಭಕ್ತಾದಿಗಳು ಭಾಗವಹಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಬಾಲಗೋಕುಲದ ಪುಟಾಣಿ ಮಕ್ಕಳಿಂದ ಭಜನಾ ಸಂಕೀರ್ತನೆ ನಡೆಯಿತು.


0 Comments