ಬದಿಯಡ್ಕ : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕೇರಳ ರಾಜ್ಯ ಸೇವಾ ಪಿಂಚಣಿದಾರರ ಒಕ್ಕೂಟ ಬದಿಯಡ್ಕ ಘಟಕ ಸಮಿತಿಯ ನೇತೃತ್ವದಲ್ಲಿ ಬೇಳ ಐಟಿಸಿ ಆವರಣದಲ್ಲಿ ಮರ ನೆಡಲಾಯಿತು. ಪಂಚಾಯತ್ ಸದಸ್ಯೆ ಅಶ್ವತಿ ಉದ್ಘಾಟಿಸಿದರು. ಘಟಕದ ಉಪಾಧ್ಯಕ್ಷ ಗೋಪಾಲ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಉಣ್ಣಿಕೃಷ್ಣನ್ ನಂಬೂದಿರಿ, ನಿವೃತ್ತ ಎಸ್ಐ ಫಿಲಿಪ್ ಥಾಮಸ್, ಪಿ. ಸುರೇಶ್, ಪಿ. ಉಣ್ಣಿಕೃಷ್ಣನ್ ಮಾಸ್ಟರ್, ಎ.ಪಿ. ಕರುಣಾಕರನ್, ಐಟಿಸಿ ಸೂಪರಿಂಟೆಂಡೆಂಟ್ ರಾಜನ್ ಬಾಬು ಮತ್ತು ಇತರರು ಉಪಸ್ಥಿತರಿದ್ದರು.

0 Comments