ಮಂಗಳೂರು : ಕಂಕನಾಡಿ ಗರಡಿಯ 'ಏಸಿರಿ' ಹೋಟೆಲ್ನ ಮಾಲೀಕರಾದ, ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿ ಪ್ರತಾಪ್ ನಗರ ನಿವಾಸಿ ವಿಶ್ವನಾಥ ಶೆಟ್ಟಿ (61) ಅವರು ಹೃದಯಾಘಾತದಿಂದ ಬುಧವಾರ ರಾತ್ರಿ ನಿಧನರಾಗಿದ್ದಾರೆ.
ಬುಧವಾರ ರಾತ್ರಿ ಸುಮಾರು ಎಂಟು ಗಂಟೆಯ ಸುಮಾರಿಗೆ ವಿಶ್ವನಾಥ ಶೆಟ್ಟಿ ಅವರು ತಮ್ಮ ಹೋಟೆಲ್ನಲ್ಲಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆಯು ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೃತರು ಮಂಗಲ್ಪಾಡಿಯ ದಿ. ಬಟ್ಟು ಶೆಟ್ಟಿ ಮತ್ತು ದೇಯಿಂಞಿ ಶೆಟ್ಟಿ ದಂಪತಿಗಳ ಪುತ್ರರಾಗಿದ್ದಾರೆ. ಮೃತರು ಪತ್ನಿ ನಳಿನಿ, ಪುತ್ರ ನವೀನ್ ಶೆಟ್ಟಿ, ಪುತ್ರಿ ನಯನ, ಅಳಿಯ ಸುದರ್ಶನ್ ಹಾಗೂ ಸಹೋದರರಾದ ಜಯಕರ, ಕುಸುಮ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಅವರ ಓರ್ವ ಸಹೋದರಿ ರತ್ನ ಈ ಹಿಂದೆಯೇ ನಿಧನರಾಗಿದ್ದಾರೆ

0 Comments