ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ ನಾಲ್ಕನೇ ವಾರ್ಡು ಕಾಟುಕುಕ್ಕೆಯ ಖಂಡೇರಿಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಖಂಡೇರಿ ಪರಿಸರವನ್ನು ಹಸಿರುಮಯವನ್ನಾಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಎಣ್ಮಕಜೆ ಗ್ರಾಮ ಪಂಚಾಯಿತಿ ಕಾಟುಕುಕ್ಕೆ ವಾರ್ಡು ಸದಸ್ಯೆ ಪುಷ್ಪಾವತಿ ವಿ.ರೈ ಖಂಡೇರಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಹಸಿರು ಕ್ರಿಯಾ ಸೇನೆ ಸದಸ್ಯರಾದ ಪದ್ಮಾಕ್ಷಿ, ಕುಟುಂಬಶ್ರೀ ಸದಸ್ಯರಾದ ಪ್ರತಿಮಾ ಖಂಡೇರಿ, ಸುಜಾತಾ ಖಂಡೇರಿ, ನಿರ್ಮಲಾ ಕೆಂಗಣಾಜೆ, ಪದ್ಮಾವತೀ ಕೊಲ್ಯ, ವಿಶ್ವನಾಥ ರೈ ಮೊದಲಾದವರು ಉಪಸ್ಥಿತರಿದ್ದರು

0 Comments