Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ವಿಯೆಟ್ನಾಂ ದೋಣಿ ದುರಂತ : ಮೃತ ಮಲಯಾಳಿಗಳ ಪಾರ್ಥಿವ ಶರೀರ ಇಂದು ಮುಂಬೈಗೆ

ತಿರುವನಂತಪುರ : ವಿಯೆಟ್ನಾಂನಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಮೃತಪಟ್ಟ ಮಲಯಾಳಿ ಪ್ರವಾಸಿಗರ ಪಾರ್ಥಿವ ಶರೀರಗಳನ್ನು ಇಂದು ರಾತ್ರಿ ಮುಂಬೈಗೆ ತರಲಾಗುತ್ತಿದೆ. ಬಳಿಕ ನೋರ್ಕಾ (NORKA) ಸಹಯೋಗದಲ್ಲಿ ಮೃತದೇಹಗಳನ್ನು ಅವರ ಸ್ವಗ್ರಾಮಗಳಿಗೆ ಕಳುಹಿಸಲಾಗುತ್ತದೆ.

ಈ ದುರಂತದಲ್ಲಿ ಕೊಟ್ಟಾರಕ್ಕರ ನಿವಾಸಿಗಳಾದ ಎ.ಸಿ. ಥಾಮಸ್ ಮತ್ತು ಪತ್ನಿ ಲೌನಿ ಥಾಮಸ್ ಸೇರಿದಂತೆ ಒಟ್ಟು 15 ಭಾರತೀಯರು ಮೃತಪಟ್ಟಿದ್ದರು. ಮೃತದೇಹಗಳನ್ನು ಹೊತ್ತ ವಿಯೆಟ್ನಾಂ ಏರ್‌ಲೈನ್ಸ್‌ನ VN979 ವಿಮಾನವು ಇಂದು ಸಂಜೆ 6 ಗಂಟೆಗೆ ವಿಯೆಟ್ನಾಂನಿಂದ ಹೊರಟು, ರಾತ್ರಿ 9.35ಕ್ಕೆ ಮುಂಬೈ ವಿಮಾನ ನಿಲ್ದಾಣ ತಲುಪಲಿದೆ. ಸಂಬಂಧಿತ ರಾಜ್ಯ ಸರ್ಕಾರಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ವೈದ್ಯಕೀಯ ಕಂಪನಿಯೊಂದು ಆಯೋಜಿಸಿದ್ದ ಪ್ರಾಯೋಜಿತ ಪ್ರವಾಸದಲ್ಲಿ ಭಾಗವಹಿಸಲು ಎ.ಸಿ. ಥಾಮಸ್ ಹಾಗೂ ಲೌನಿ ಥಾಮಸ್ ಅವರು ಜುಲೈ 7ರಂದು ಪ್ರಯಾಣ ಬೆಳೆಸಿದ್ದರು. ರೈಲಿನಲ್ಲಿ ಚೆನ್ನೈ ತಲುಪಿ ಅಲ್ಲಿಂದ ವಿಮಾನದ ಮೂಲಕ ವಿಯೆಟ್ನಾಂ ಸೇರಿದ್ದರು. ಅಲ್ಲಿಗೆ ತಲುಪಿದ ಬಳಿಕವೂ ಕುಟುಂಬದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಅವರು, ದೋಣಿ ವಿಹಾರ ಆರಂಭಕ್ಕೂ ಮುನ್ನ ತಮ್ಮ ಸಂತಸದ ಕ್ಷಣಗಳನ್ನು ಕುಟುಂಬದ ವಾಟ್ಸ್ಆ್ಯಪ್ ಗುಂಪಿಗೆ ಹಂಚಿಕೊಂಡಿದ್ದರು.ಬಳಿಕ ಕೆಲವೇ ಕ್ಷಣಗಳಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಇಬ್ಬರೂ ಸೇರಿದಂತೆ ಹಲವು ಭಾರತೀಯರು ಮೃತಪಟ್ಟಿದ್ದರು.

Post a Comment

0 Comments

ಜಾಹೀರಾತು

Responsive Advertisement