ಕುಂಬಳೆ : ಸಹಕಾರಿ ಬ್ಯಾಂಕ್ಗಳಿಂದ ಕ್ಷೇಮ ಪಿಂಚಣಿ ವಿತರಣೆಯನ್ನು ಸ್ಥಗಿತಗೊಳಿಸಿರುವ ಐಕ್ಯರಂಗ ಸರ್ಕಾರದ ನಿರ್ಧಾರವನ್ನು ಖಂಡಿಸಿ ಕೆಸಿಇಯು (ಸಿಐಟಿಯು) ಕುಂಬಳೆ ಏರಿಯಾ ಸಮಿತಿ ನೇತೃತ್ವದಲ್ಲಿ ಕುಂಬಳೆ ಸಹಕಾರಿ ಆಸ್ಪತ್ರೆ ಆವರಣದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.
'ಕ್ಷೇಮ ಪಿಂಚಣಿ ನಮ್ಮ ಹಕ್ಕು. ಅದನ್ನು ಕಸಿದುಕೊಳ್ಳಲು ಬಿಡುವುದಿಲ್ಲ' ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಪ್ರತಿಭಟನಾ ಮೆರವಣಿಗೆಯನ್ನು ಕೆಸಿಇಯ ಏರಿಯ ಸಮಿತಿ ಅಧ್ಯಕ್ಷ ವಿಠಲ್ ರೈ ಉದ್ಘಾಟಿಸಿದರು. ಜಯಶ್ರೀ ಅಧ್ಯಕ್ಷತೆ ವಹಿಸಿದ್ದರು. ಪ್ರದೀಪ್, ಸತೀಶ್ , ಅನಿಲ್ ಮೊದಲಾದವರು ಮಾತನಾಡಿದರು. ಕೆ.ಪ್ರದೀಪ್ ಸ್ವಾಗತಿಸಿದರು.
ಹೆಚ್ಚಿನ ಅಪ್ಡೇಟ್ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments