Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ತುಳು ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪ್ರಕಟ

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2024 ಹಾಗೂ 2025ನೇ ಸಾಲಿನ ಪುಸ್ತಕ ಬಹುಮಾನವನ್ನು   ಪ್ರಕಟಿಸಲಾಗಿದೆ.

2024ರ ಸಾಲಿನ ಕವಿತೆ ವಿಭಾಗದ ಪುರಸ್ಕಾರಕ್ಕೆ  ಯಶೋದ ಮೋಹನ್ ಅವರ 'ತಡ್ಯ ಕಡಪುನಗ' ಕೃತಿ ಆಯ್ಕೆಯಾಗಿದೆ. 2024 ನೇ ಸಾಲಿನ ನಾಟಕ ಪುಸ್ತಕ ವಿಭಾಗದ ಪುರಸ್ಕಾರಕ್ಕೆ ಅಕ್ಷತಾ ರಾಜ್ ಪೆರ್ಲ ಅವರ ‘ಮಂದಾರ ಮಲಕ' ಕೃತಿ ಆಯ್ಕೆಯಾಗಿದೆ.

2025ನೇ ಸಾಲಿನ ಕಾದಂಬರಿ ವಿಭಾಗದ ಪುರಸ್ಕಾರಕ್ಕೆ ರೂಪಕಲಾ ಆಳ್ವ ಅವರ 'ಪಮ್ಮಕ್ಕೆನ ಪೊರ್ಂಬಾಟ' ಕೃತಿ ಆಯ್ಕೆಯಾಗಿದೆ. 2025ನೇ ಸಾಲಿನ ಕವಿತೆ ವಿಭಾಗದ ಪುರಸ್ಕಾರಕ್ಕೆ ಅಶೋಕ ಎನ್ ಕಡೇಶಿವಾಲಯ ಅವರ 'ಬದ್ಕ್ ಬಾಗ್ಯೊದ ಬೊಲ್ಪು' ಕೃತಿ ಆಯ್ಕೆಯಾಗಿದೆ. ಈ ಪುರಸ್ಕಾರ  ತಲಾ ಇಪ್ಪತ್ತೈದು ಸಾವಿರ ರೂಪಾಯಿಗಳ ಬಹುಮಾನ ಮೊತ್ತ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. 

ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ 04 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement